ಮಂಗಳೂರು: ಮಳಲಿ ವಿವಾದಿತ ಮಸೀದಿ ಜಾಗದ ಕುರಿತು 2ದಿನಗಳ ಹಿಂದೆ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಮಳಲಿ ಮಸೀದಿಯಲ್ಲಿ ಶೈವ ಸಾನ್ನಿಧ್ಯ ಗೋಚರಿಸಿದೆ.
ಈ ವಿಚಾರದಲ್ಲಿ ಸೌಹಾರ್ದತೆ ಕಾಯ್ದುಕೊಳ್ಳಲು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ಹೆಜ್ಜೆ ಇರಿಸಲು ತೀರ್ಮಾನಿಸಿದೆ . ಮಸೀದಿಯಲ್ಲಿ ದೇವ ಸಾನ್ನಿಧ್ಯ ಬಗೆಗೆ ಹೆಚ್ಚಿನ ಶೋಧನೆ ನಡೆಸಲು ಅಷ್ಟಮಂಗಲ ಪ್ರಶ್ನೆ ನಿರ್ಧರಿಸುವ ವಿಶ್ವಹಿಂದು ಪರಿಷತ್ ಅದಕ್ಕೂ ಮೊದಲು ಮಸೀದಿಯ ಪ್ರಮುಖರ ಭೇಟಿಗೆ ಮುಂದಾಗಿದೆ.
ಸೌಹಾರ್ದತೆ ಹೆಜ್ಜೆಯ ಮೊದಲ ಭಾಗವಾಗಿ ಹೋರಾಟಕ್ಕೆ ಸ್ಥಳೀಯರು ಹಿಂದೂ ಸಂತರು ಮುಖಂಡರನ್ನು ಒಳಗೊಂಡ ಪ್ರತ್ಯೇಕ ಸಮಿತಿ ರಚಿಸಿ ಬಳಿಕ ಮಸೀದಿಯ ಪ್ರಮುಖರ ಭೇಟಿಗೆ ಚಿಂತನೆ ನಡೆಸಿದೆ. ಮಸೀದಿ ಪ್ರಮುಖರನ್ನು ಭೇಟಿ ಮಾಡಿ ಅವರಿಗೆ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ ಮಸೀದಿಯಲ್ಲಿ ಗುರುಮಠದ ಗೋಚರದ ಬಗ್ಗೆ ಮನವರಿಕೆ ಮಾಡಿ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟುಕೊಡುವಂತೆ ಕೋರಿಕೆ ಸಲ್ಲಿಸಲು ತೀರ್ಮಾನಿಸಿದೆ.
ವಿಶ್ವ ಹಿಂದು ಪರಿಷತ್ ಮಸೀದಿ ಸ್ವಾಧೀನ ಹೋರಾಟದಿಂದ ಅಶಾಂತಿಗೆ ಕಾರಣವಾಗಬಾರದು ಹಾಗಾಗಿ ಈ ವಿಚಾರದಲ್ಲಿ ಅಗತ್ಯ ದಾಖಲೆ ಸಹಿತ ಸೂಕ್ಷ್ಮ ಹೆಜ್ಜೆ ಇರಿಸಬೇಕಾಗುತ್ತದೆ. ಹೀಗಾಗಿ ಅವಕಾಶಗಳನ್ನು ಮುಕ್ತವಾಗಿ ಇರಿಸಿಕೊಳ್ಳಲು ತೀರ್ಮಾನಿಸಿದೆ ಆದರೆ ಯಾವುದೇ ಕಾರಣಕ್ಕೂ ಮಸೀದಿಯಲ್ಲಿರುವ ದೇವ ಸಾನಿಧ್ಯಕ್ಕೆ ಕೈತಪ್ಪಬಾರದು ಎಂದು ಯೋಜನೆ ರೂಪಿಸಲಾಗುತ್ತಿದೆ.
ಇದೇ ವೇಳೆ ತಾಂಬೂಲ ಪ್ರಶ್ನೆಯಲ್ಲಿ ಮಳಲಿ ಮಸೀದಿಯಲ್ಲಿ ದೈವ ಸಾನ್ನಿಧ್ಯ ಪತ್ತೆಯಾದ ಬೆನ್ನಲ್ಲೇ ಸಮೀಪದ ಗುರುಪುರ ಜಂಗಮ ಮಠಕ್ಕೆ ವಿಶ್ವಹಿಂದು ಪರಿಷದ್ ನಿಯೋಗ ಭೇಟಿ ನೀಡಿದೆ ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿ ಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಜಂಗಮಮಠದ ಐತಿಹಾಸಿಕ ಹಿನ್ನಲೆ ಬಗ್ಗೆ ಮಾಹಿತಿ ಸಂಗ್ರಹಿಸಿದರು ಅಲ್ಲದೆ ಮುಂದಿನ ಹೋರಾಟಗಳ ಬಗ್ಗೆ ಸ್ವಾಮೀಜಿ ಜತೆ ಸುದೀರ್ಘ ಚರ್ಚೆ ನಡೆಸಿದರು.
ಇದೇ ವೇಳೆ ಮಸೀದಿ ಸಂಬಂಧ ವಿಶ್ವಹಿಂದು ಪರಿಷತ್ ನಡೆಸುವ ಹೋರಾಟಕ್ಕೆ ಮಠದ ಬೆಂಬಲ ಕೋರಲಾಯಿತು .ಮಳಲಿ ಮಸೀದಿಯಲ್ಲಿ ದೈವಸನ್ನಿಧಿ ಇದ್ದ ಬಗ್ಗೆ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಿದೆ ಇದೇ ವೇಳೆ ಟಿಪ್ಪು ಸುಲ್ತಾನ ಸಹಚರನ ದಾಳಿಯಿಂದ ಮಠ ನಾಶವಾದ ಬಗ್ಗೆ ಜಂಗಮಮಠದಲ್ಲಿ ಪುಸ್ತಕದಲ್ಲಿ ಸ್ಫೋಟಕ ಅಂಶವೊಂದು ಇದೆ ಎನ್ನಲಾಗುತ್ತಿದ್ದು. 2000 ನೇ ಇಸವಿಯಲ್ಲಿ ಪ್ರಕಟಗೊಂಡ ನೀಲಕಂಠ ವೈಭವ ಪುಸ್ತಕದಲ್ಲಿ ಟಿಪ್ಪು ಸಹಚರನ ದಾಳಿಯ ಬಗ್ಗೆ ಉಲ್ಲೇಖವಾಗಿದೆ.
ಮಳಲಿ ಮಸೀದಿ ಜಾಗದಲ್ಲಿ ಶೈವ ಸಂಪ್ರದಾಯದ ಮಠಕ್ಕೆ ಟಿಪ್ಪು ಸಹಚರ ಶೇಖಾಲಿ ನವಾಬ ದಾಳಿ ನಡೆಸಿದ್ದ ಮಂಗಳೂರಿನಲ್ಲಿ 64ಲಿಂಗಾಯತ ಮಠಗಳ ಪೈಕಿ 21 ಮಠಗಳು ನಾಶವಾಗಿವೆ . ಇದೇ ದಾಳಿಗೆ ತುತ್ತಾಗಿ ಮಸೀದಿಯ ಜಾಗದ ಲಿಂಗಾಯಿತ ಮಠವು ನಾಶವಾದ ಶಂಕೆಯನ್ನು ವ್ಯಕ್ತ ಪಡಿಸಲಾಗುತ್ತಿದೆ ಜೊತೆಗೆ ಮಳಲಿ ಮಸೀದಿ ವಾಸ್ತುಶಿಲ್ಪ ಮತ್ತು ಗುರುಪುರ ಲಿಂಗಾಯತ ಜಂಗಮ ಮಠದ ವಾಸ್ತುಶಿಲ್ಪಕ್ಕೂ ಸಾಮ್ಯತೆ ಕಂಡುಬಂದಿದೆ .ಮೇಲ್ಚಾವಣಿ ಬಾಗಿಲುಗಳ ಶಿಲ್ಪಕಲೆಗಳಲ್ಲಿ ಭಾರೀ ಸಾಮ್ಯತೆಯಿದ್ದು ಮಳಲಿಯ ಶೈವ ಮಠಕ್ಕೆ ದಾಳಿ ನಡೆಸಿ ಟಿಪ್ಪು ಮಸೀದಿ ಕಟ್ಟಿಸಿರುವ ಸಂಖ್ಯೆಯನ್ನು ರುದ್ರಮುನಿಸ್ವಾಮೀಜಿ ವ್ಯಕ್ತಪಡಿಸುತ್ತಾರೆ.