ಬೆಳ್ತಂಗಡಿ: ಚಿತ್ಪಾವನ ಜನಾಂಗದಲ್ಲಿ ಆಠವಲೆ ವಂಶದ ಪರಿಚಯ ಎಂಬ ಹೊತ್ತಗೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಪುಸ್ತಕದ ಸಂಪಾದಕ ನಿವೃತ್ತ ಮುಖ್ಯೋಪಾಧ್ಯಾಯ ಪೆರಡೇಲು ಗೋವಿಂದ ದಾಮಲೆ ಅವರನ್ನು ಹೆಗ್ಗಡೆ ಯವರು ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಹಿರಿಯರಾದ ಪ್ರಭಾಕರ ಆಠವಳೆ ಸೂಳಬೆಟ್ಟು, ರಘುನಾಥ ( ಆಠವಲೆ) ಹೆಬ್ಬಾರ್ ಹೊಸ್ತೋಟ, ಶೃತಿ ( ಆಠವಲೆ) ಹೆಬ್ಬಾರ್ ಹೊಸ್ತೋಟ, ಮನೋಹರ ಗೋಖಲೆ ಬೆಂಗಳೂರು, ಪತ್ರಕರ್ತ ದೀಪಕ ಆಠವಲೆ ಸೂಳಬೆಟ್ಟು ಉಪಸ್ಥಿತರಿದ್ದರು.
ಪುಸ್ತಕದಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸುಮಾರು 350 ವರ್ಷಗಳಿಂದ ನೆಲೆಸಿರುವ ಆಠವಲೆ ಜನಾಂಗದ ಮಾಹಿತಿಯನ್ನು ದಾಖಲೆ ಸಹಿತ ವಿವರಿಸಲಾಗಿದೆ.