News Karnataka Kannada
Friday, May 03 2024
ಮಂಗಳೂರು

ಗಮನಸೆಳೆದ ಪೊಲೀಸ್ ಪಥಸಂಚಲನ

Rsz Img 20210803 Wa0144
Photo Credit :

ಬಂಟ್ವಾಳ :  ಬಂಟ್ವಾಳ ತಾಲೂಕಿನ ಸೂಕ್ಷ್ಮ ಪ್ರದೇಶಗಳಲ್ಲಿ ಬಂಟ್ವಾಳ ವೃತ್ತದ ಪೊಲೀಸ್ ಹಾಗೂ ಕ್ಷಿಪ್ರ ಕಾರ್ಯ ಪಡೆ ವತಿಯಿಂದ ಪಥ ಸಂಚಲನ ನಡೆಯಿತು.

ಆಗಸ್ಟ್ 3 ರಂದು ಮಂಗಳವಾರ ಬಿಸಿರೋಡಿನ ಸೂಕ್ಷ್ಮ ಪ್ರದೇಶಗಳಾದ ಪರಂಗಿಪೇಟೆ, ಕೈಕಂಬ, ಮೆಲ್ಕಾರ್, ಕಲ್ಲಡ್ಕ ಹಾಗೂ ವಿಟ್ಲ ಪೇಟೆಯಲ್ಲಿ ರ್ಯಾಪಿಡ್ ಆಕ್ಸನ್ ಪೋರ್ಸ್ (ಕ್ಷಿಪ್ರ ಕಾರ್ಯ ಪಡೆ ) ಪಥಸಂಚಲನ ನಡೆಸಿದರು, ಅವರ ಜೊತೆ ಬಂಟ್ವಾಳ ವೃತ್ತದ ಬಂಟ್ವಾಳ ನಗರ ಠಾಣೆ, ಗ್ರಾಮಾಂತರ ಠಾಣೆ ಹಾಗೂ ಮೆಲ್ಕಾರ್ ಟ್ರಾಫಿಕ್ ಠಾಣಾ ಪೊಲೀಸರು ಪಥಸಂಚಲನದಲ್ಲಿ ಸಾಥ್ ನೀಡಿದರು.

ನಾಗರೀಕರ ರಕ್ಷಣೆ ಪೊಲೀಸ್ ಇಲಾಖೆಯ ಹೊಣೆಯಾಗಿದ್ದು, ಎಂತಹ ಕಠಿಣ ಸಂದರ್ಭದಲ್ಲಿಯೂ ಪೊಲೀಸ್ ಇಲಾಖೆಯ ಜೊತೆ ಅರೆಸೇನೆ ತುಕಡಿ ಸಹಾಯಕ್ಕೆ ಬರಲಿದೆ.

ಇದು ಕರ್ನಾಟಕದ 97ನೇಯ ಬ್ಯಾಚ್‌ನ ತುಕಡಿಯಾಗಿದ್ದು, ಇದರಲ್ಲಿ 60 ಮಂದಿ ಸಿಬ್ಬಂದಿಗಳು ಇದ್ದಾರೆ.ಈ ತುಕಡಿಯಲ್ಲಿ ಡಿ.ಎಸ್.ಪಿ., ಸಿ.ಪಿ.ಐ ಮತ್ತು ಪಿ.ಎಸ್.ಐ. ಇರಲಿದ್ದಾರೆ. ಇದು ರಾಜ್ಯದ 23 ಜಿಲ್ಲೆಗಳಲ್ಲೂ ಸಂಚರಿಸಲಿದೆ ಎಂದರು.

ಕ್ಷಿಪ್ರ ಕಾರ್ಯ ಪಡೆಯ ಅಸಿಸ್ಟೆಂಟ್ ಕಮಾಂಡೆ0ಟ್ ಶಹಜಾನ್ ಪಿ.ಕೆ, ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾ ಎಸ್‌ಐ ಅವಿನಾಶ್, ಗ್ರಾಮಾಂತರ ಎಸ್.ಐ. ಪ್ರಸನ್ನ, ಟ್ರಾಫಿಕ್ ಎಸ್.ಐ. ರಾಜೇಶ್.ಕೆ.ವಿ,  ಅಪರಾಧ ವಿಭಾಗದ ಎಸ್‌ಐ. ಸಂಜೀವ.ಕೆ ಮತ್ತಿತರರು ಪಥಸಂಚಲನದಲ್ಲಿ ಪಾಲ್ಗೊಂಡರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು