ಮಂಗಳೂರು: ಉಳ್ಳಾಲದಲ್ಲಿ ಮಾಜಿ ಶಾಸಕ ದಿ.ಇದಿನಬ್ಬ ಮಗನ ಮನೆಗೆ ಎನ್.ಐ.ಎ ದಾಳಿ ನಡೆಸಿದ ಹಿನ್ನಲೆಯಲ್ಲಿ, ವಿ.ಎಚ್.ಪಿ, ಬಜರಂಗದಳ ಕಾರ್ಯಕರ್ತರು ಅವರ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾರೆ
ಪೊಲೀಸ್ ರು ತಕ್ಷಣ ಮುಂಜಾಗ್ರತಾ ಕ್ರಮ ಕೈಗೊಂಡು ಪ್ರತಿಭಟನೆಕಾರರನ್ನು ಮನೆ ಗೇಟ್ ನ ಬಳಿಯೇ ತಡೆದಿದ್ದಾರೆ.
ಉಳ್ಳಾಲ ಪೊಲೀಸ್ ರು ಕೂಡಲೇ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ವಿ ಎಚ್ ಪಿ ಕಾರ್ಯಕರ್ತರು ಇದಿನಬ್ಬ ಸೊಸೆಯ ಜೊತೆ ಮಾತಾನಾಡುವುದಕ್ಕೆ ಅವಕಾಶ ಕೇಳಿದ್ದಾರೆ.
ಜನಜಾಗೃತಿಗಾಗಿ ಉಳ್ಳಾಲದ ರಸ್ತೆಗಳಲ್ಲಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು,ಪ್ರತಿಭಟನೆ ನಡುವೆಯೇ ಮನೆಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.