ಮಂಗಳೂರು : ಡಿಸೆಂಬರ್ ಐದರಂದು ಆರಂಭಗೊಂಡಿದ್ದ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಕೋವಿಡ್ ಕಾರಣದಿಂದ ಬ್ರೇಕ್ ಬಿದ್ದಿದೆ ಬಾಕಿ ಇರುವ ಹನ್ನೊಂದು ಕಂಬಳಗಳನ್ನು ಸಮಿತಿ ತಾತ್ಕಾಲಿಕವಾಗಿ ಮುಂದೂಡಿದೆ ಅವಕಾಶ ಲಭಿಸಿದರೆ ದಿನಾಂಕಗಳನ್ನು ಮರು ಹೊಂದಾಣಿಕೆ ಮಾಡಿಕೊಂಡು ನಡೆಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ತಿಳಿಸಿದ್ದಾರೆ
ಕಂಬಳ ಸಮಿತಿಯು ಒಟ್ಟು ಹದಿನೆಂಟು ಕಂಬಳಗಳ ದಿನಾಂಕಗಳನ್ನು ಪ್ರಕಟಿಸಿತು ಡಿಸೆಂಬರ್ ಐದರಿಂದ ಹೊಕ್ಕಾಡಿಗೋಳಿ ಮಿಯಾರು ಮೂಡಬಿದಿರೆ ಕಕ್ಯಪದವು ಹಾಗೂ ಮೂಲ್ಕಿ ಕಂಬ್ಳಾ ನಡೆದಿವೆ .ಜಪ್ಪಿನಮೊಗರು ಸುರತ್ಕಲ್ ಕಂಬಳಗಳು ಕಾರಣಾಂತರಗಳಿಂದ ಆ ಯೋಜನೆ ಗೊಳ್ಳುತ್ತಿಲ್ಲ ಈ ತಿಂಗಳು ನಡೆಯಬೇಕಿದ್ದ ಅಡ್ವೆ ನಂದಿಕೂರು ಮಂಗಳೂರು ಹಾಗೂ ಪುತ್ತೂರು ಕಂಬಳಗಳನ್ನು ಮುಂದೂಡಲಾಗಿದೆ .ಆದರೆ ಸಾಂಪ್ರದಾಯಿಕ ಮತ್ತು ದೇವರ ಕಂಬಳ ಗಳಾದ ಜನವರಿ ಇಪ್ಪತ್ತೊಂಬತ್ತರ ಐಕಳಬಾವ ಫೆಬ್ರವರಿ ಹತ್ತೊಂಬತ್ತು ತಿರುವೈಲು ಮತ್ತು ಮಾರ್ಚ್ ಹತ್ತೊಂಬತ್ತು ರ ಕಟಪಾಡಿ ಕಂಬಳಗಳನ್ನು ಅದೇ ದಿನ ಸಂಕಲ್ಪ ಮಾಡಿದಂತೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ