ಸುಬ್ರಹ್ಮಣ್ಯ: ಇಲ್ಲಿನ ಕೊಲ್ಲಮೊಗ್ರ ಸಮೀಪದಲ್ಲಿ ಬೆಳಗ್ಗೆ ಹಾಲು ಡೈರಿಗೆ ಹೋಗುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ ನಡೆಸಿದೆ.ಮುಂಜಾನೆ ಮಂಜು ಕವಿದಿದ್ದು ಅವರಿಗೆ ದಾರಿಯ ಪಕ್ಕದಲ್ಲಿ ಕಾಡಾನೆ ನಿಂತಿದ್ದು ಗೊತ್ತಾಗಿರಲಿಲ್ಲ.
ಯುವಕ ತೀವ್ರ ಸ್ವರೂಪದ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕೊಲ್ಲಮೊಗ್ರದ ಗುರುಪ್ರಸಾದ್ (22)ಎಂಬವರು ಭಾನುವಾರ ಬೆಳಗ್ಗೆ ಹಾಲನ್ನು ಡೈರಿಗೆ ಹಾಕಲು ತೆರಳಿದ್ದರು.
ಹತ್ತಿರಕ್ಕೆ ಬಂದ ಗುರುಪ್ರಸಾದ್ರನ್ನು ಆನೆ ಸೊಂಡಿಲಿನಲ್ಲಿ ಎತ್ತಿ ಎಸೆದಿರುವುದು ಮಾತ್ರವಲ್ಲ ಕಾಲಿನಿಂದಲೂ ತುಳಿದಿದೆ. ಯುವಕನ ಪಕ್ಕೆಲುಬು ಮುರಿದಿದ್ದಲ್ಲದೆ ಬೆನ್ನೆಲುಬಿಗೂ ಹಾನಿಯಾಗಿದೆ.ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಣ್ಯ ಇಲಾಖೆಯವರು ಪರಿಶೀಲನೆ ನಡೆಸಿದ್ದಾರೆ.