News Karnataka Kannada
Sunday, May 05 2024
ಮಂಗಳೂರು

ಕುಮಾರಿ ರೂತ್ ಕ್ಲೇರ್ ಡಿ ಸಿಲ್ವಾ ಇವರಿಗೆ ಕಾಂಗ್ರೆಸ್ ವತಿಯಿಂದ ಸನ್ಮಾನ

New Project 2021 09 20t143936.086
Photo Credit :

ಮಂಗಳೂರು : ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ರೂತ್ ರವರ ಮನೆಗೆ ಎಐಸಿಸಿ ಕಾರ್ಯದರ್ಶಿ ಐವನ್ ಡಿ ಸೋಜ ರವರ ನೇತೃತ್ವದ  ತಂಡ  ತೆರಳಿ, ರೂತ್ ರವರಿಗೆ ಸನ್ಮಾನಿಸಲಾಯಿತು  ಮತ್ತು ಮುಂದೆ ಚಾರ್ಟೆಡ್ ಅಕೌಂಟೆಂಟ್ ಆಗಿ ಬರಲು ಉತ್ತೇಜಿಸುವ ಜೊತೆಗೆ ಯುಪಿಎಸ್ ಸಿ ಮೂಲಕ ಐಎಎಸ್ ಪದವಿ ಗಳಿಸಿ, ದೇಶ ಸೇವೆಗೆ ಮುಂದಾಗಬೇಕೆಂದು ಸಲಹೆ ನೀಡಿದರು ಮತ್ತು ರೂತ್ ರವರು ಮಾತನಾಡಿ, ತನಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಐ ಎ ಎಸ್ ಮಾಡುವ ಇರಾದೆಯನ್ನು ನೇರವೇರಿಸುವುದಾಗಿ ನುಡಿದರು. ಈ ಸಂದರ್ಭದಲ್ಲಿ ಅವರ ತಂದೆ ತಾಯಿ ಯವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಹಾಗೂ ಕಾರ್ಪೊರೇಟರ್  ಶಶಿಧರ ಹೆಗಡೆ, ಕಾರ್ಪೊರೇಟರ್ ನವೀನ್ ಡಿಸೋಜ, ಮಾಜಿ ಕಾರ್ಪೊರೇಟರ್ ಡಿಕೆ ಅಶೋಕ್, ಭಾಸ್ಕರ್ ರಾವ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ,ಆಶಿತ್ ಪಿರೇರಾ, ದಕ್ಷಿಣ ಬ್ಲಾಕ್ ಕಾಂಗ್ರೆಸ್  ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಐವನ್ ಡಿಸೋಜ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ದೀಕ್ಷಿತ್ ಅತಾವರ, ಜೇಮ್ಸ್ ಪ್ರವೀಣ್, ಮೀನಾ ಟೆಲ್ಲಿಸ್, ಪಿಯುಸ್ ಮೊಂತೇರೋ,  ಬಾಸಿಲ್ ರೋಡ್ರಿಗಸ್, ಆನಂದ್ ಸೋನ್ಸ್, ಸತೀಶ್ ಪೇಂಗಲ್, ಗಂಗಾಧರ್, ವಿಕಾಸ್ ಶೆಟ್ಟಿ, ಹಬೀಬುಲ್ಲಾ ಕನ್ನೂರು ಮುಂತಾದವರು ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು