ಮಂಗಳೂರು: ಪ್ರಸ್ತುತ ನಾಡಿನೆಲ್ಲೆಡೆ ದಸರಾ, ನವರಾತ್ರಿ ಸಂಭ್ರಮ ಮನೆ ಮಾಡಿದೆ. ಸಾವಿರಾರು ಭಕ್ತರು ದೇವಸ್ಥಾನಗಳಿಗೆ ತೆರಳಿ ತಮ್ಮ ಇಷ್ಟಾರ್ಥ ಸಿದ್ದಿಗಳಿಗಾಗಿ, ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಇನ್ನು ಉತ್ಸವದ ನವರಾತ್ರಿ ಸಂಭ್ರಮದಲ್ಲಿ ಜಾತ್ರೆ ಕೂಡ ಒಂದು.
ಕೆಲ ವ್ಯಾಪಾರಿಳಿಗೆ ತಮ್ಮ ವ್ಯಾಪಾರಗಳಿಂದಲೇ ಬದುಕನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇರುತ್ತದೆ. ಹಾಗಾಗಿ ಉತ್ಸವಗಳಲ್ಲಿ ಭಕ್ತರನ್ನು ಆಕರ್ಷಿಸುವುದು ಕೇವಲ ದೇವರು ಮಾತ್ರವಲ್ಲ. ವರ್ಷದಲ್ಲಿ ಒಮ್ಮೆ ನಡೆಯುವ ಜಾತ್ರೆಗಳು ಕೂಡ ಒಂದು. ಆದರೆ ಇಲ್ಲಿ ಸಿಗುವ ತಿನ್ನಿಸುಗಳ ಮೇಲೆ ನಾವು ಗಮನ ಹರಿಸಲೇ ಬೇಕು. ಇಲ್ಲವಾದಲ್ಲಿ ಆರೋಗ್ಯ ಹಳ್ಳ ಹಿಡಿಯೋದು ಗ್ಯಾರಂಟಿ. ಹೌದು. . ನಾವು ಈಗಾಗಲೇ ಆನೇಕ ಬಾರಿ, ಕಲುಷಿತ ನೀರುಗಳನ್ನು ಬಳಸಿ ಆಹಾರವನ್ನು ತಯಾರಿಸುವ ವೈರಲ್ ವಿಡಿಯೋಗಳನ್ನು ನೋಡಿರುತ್ತೆವೆ.
ಸ್ವಚ್ಚತೆಗೆ ಆದ್ಯತೆ ನೀಡದೆ ಬೇಕಾಬಿಟ್ಟಿಯಾಗಿ ಆಹಾರ ತಯಾರಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿರುವುದು ತಿಳಿದೇ ಇದೆ. ಇದೀಗ ಇದರ ಸಾಲಿಗೆ ಮಂಗಳೂರಿನ ಪ್ರಸಿದ್ಧ ಕುದ್ರೋಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಜಾತ್ರೆಯಲ್ಲಿನ ದೃಶ್ಯವೊಂದು ವೈರಲ್ ಆಗಿದೆ. ಮಟ್ಕಾ ಸೋಡಾ ವ್ಯಾಪಾರಿಗಳು ಜನರ ಆರೋಗ್ಯದ ಜೊತೆ ಆಟ ಆಡುತ್ತಿರುವ ಘಟನೆಯೊಂದು ನಡೆದಿದೆ.
ವೈರಲ್ ಆಗಿರುವ ದೃಶ್ಯದಲ್ಲಿ ವ್ಯಕಿಯೊಬ್ಬ ತನ್ನ ಕೊಳಕು ಕೈಗಳಿಂದ ಕಲುಷಿತ ನೀರಿನಲ್ಲಿ ಮಡಕೆಗಳನ್ನು ತೊಳೆದು ಅದರಲ್ಲಿಯೇ ಸೋಡ ಹಾಕಿ ಗ್ರಾಹಕರಿಗೆ ನೀಡಿದ್ದಾರೆ. ಈ ಮೂಲಕ ಗ್ರಾಹಕರ ಆರೋಗ್ಯದ ಜೊತೆ ಮಟ್ಕಾ ಸೋಡಾ ವ್ಯಾಪಾರಿಗಳು ಆಟ ಆಡುತ್ತಿರುವುದು ತಿ. ಇದರ ದೃಶ್ಯವೊಂದನ್ನು ಗ್ರಾಹಕರು ಸೆರೆಹಿಡಿದ್ದಾರೆ. ಇದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.