ಮಂಗಳೂರು : ನಗರದ ಕೋಡಿಕಲ್ ಪರಿಸರದಲ್ಲಿ ಸಂಜೆ ವೇಳೆ ಕಾರು ಚಾಲಕ ಬಸ್ ಚಾಲಕನಿಗೆ ಮೇಲೆ ಹಲ್ಲೆ ಮಾಡಿದ ಘಟನೆ ನ.16ರಂದು ನಡೆದಿದೆ.
ಮಂಗಳೂರಿನಿಂದ ಕೋಡಿಕಲ್ ಸಂಚಾರಿಸುತ್ತಿದ್ದ ವೇಳೆ ಕೋಡಿಕಲ್ ರಸ್ತೆ ಮಧ್ಯೆ ಕಾರು ನಿಲ್ಲಿಸಿದ ಹಿನ್ನೆಲೆ ಹಾರ್ನ್ ಹಾಕಿದ ಬಸ್ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರು ಚಾಲಕ ಹಲ್ಲೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಮಟ್ಟಿಲೇರಿದ ಬಸ್ ಸಿಬ್ಬಂದಿಗಳು. ಠಾಣೆಯಲ್ಲಿ ಪ್ರಕರಣ ದಾಖಲಿಸದೆ ಹೊಂದಾಣಿಕೆ ಮಾಡಿ ವಾಪಾಸು ಕಲಿಸಿದ್ದಾರೆ ಎಂದು ಬಸ್ ಚಾಲಕರ ಆರೋಪ ಮಾಡಿದ್ದಾರೆ.