ಮಂಗಳೂರು : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಕೆಎಸ್ಎನ್ ರಾಜೇಶ್ ಭಟ್ ಹೈಕೋರ್ಟ್ ಸೋಮವಾರ ಷರತ್ತುಬದ್ಧ ಜಾಮೀನು ನೀಡಿದೆ.
ವಕೀಲ ರಾಜೇಶ್ ಭಟ್ ಮೇಲೆ ತನ್ನದೇ ಕಚೇರಿಯಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದ ಮಹಾರಾಷ್ಟ್ರದ ಮೂಲದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕಿರುಕುಳ ನೀಡಿದ ಆರೋಪ ವ್ಯಕ್ತವಾಗಿತ್ತು ಹಾಗಾಗಿ ರಾಜೇಶ್ ಭಟ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆ ಕ್ಷಣದಿಂದ ರಾಜೇಶ್ ಭಟ್ ತಲೆಮರೆಸಿಕೊಂಡಿದ್ದು ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ಮಧ್ಯೆ ಸಂತ್ರಸ್ತ ಯುವತಿಯನ್ನು ದೂರು ನೀಡದಂತೆ ಬೆದರಿಸಿ ಕಾರಣಕ್ಕೆ ಉರ್ವ ಪೊಲೀಸ್ ಠಾಣೆಯ ಎಸ್ಸೈ ಸಹಿತ ಇಬ್ಬರನ್ನು ಅಮಾನತು ಗೊಳಿಸಲಾಗಿತ್ತು. ಅಲ್ಲದೆ ರಾಜೇಶ್ ಭಟ್ ಪರಾರಿಯಾಗಲು ಸಹಕರಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು .
ಈ ಎಲ್ಲಾ ಬೆಳವಣಿಗೆಯ ಮಧ್ಯೆಯೇ ಬಾರ್ ಕೌನ್ಸಿಲ್ ನಿಂದ ರಾಜೇಶ್ ಭಟ್ ನನ್ನು ಅಮಾನತುಗೊಳಿಸಲಾಗಿತ್ತು . ಸುಮಾರು 2ತಿಂಗಳ ಕಾಲ ಆರೋಪಿ ರಾಜೇಶ್ ಭಟ್ ತಲೆಮರೆಸಿದ್ದ ಕಾರಣ ಪೊಲೀಸರು ಲುಕೌಟ್ ನೋಟಿಸ್ ಜಾರಿಗೊಳಿಸಿದ್ದರೂ ಬಂಧನ ತಪ್ಪಿಸಲು ರಾಜೇಶ್ ಭಟ್ ಮಂಗಳೂರು ನ್ಯಾಯಾಲಯ ಹಾಗೂ ಬೆಂಗಳೂರು ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದರೂ ತಿರಸ್ಕೃತಗೊಂಡಿತ್ತು.
ಇದರಿಂದಾಗಿ ಆರೋಪಿ ರಾಜೇಶ್ ಭಟ್ ಡಿ. 20ರಂದು ಮಂಗಳೂರು ಕೋರ್ಟಿಗೆ ಶರಣಾಗಿದ್ದ ಅಲ್ಲಿಂದಲೇ ಪೊಲೀಸರನ್ನು ಬಂಧಿಸಿದ್ದು ಅನಾರೋಗ್ಯ ಕಾರಣ ನೀಡಿ ರಾಜೇಶ್ ಆಸ್ಪತ್ರೆಗೆ ದಾಖಲಾಗಿದ್ದ ಬಳಿಕ ಪೊಲೀಸರು ರಾಜೇಶ್ ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು ಹಾಗೆಯೇ ರಾಜೇಶ್ ಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತ್ತು.