ಬೆಳ್ತಂಗಡಿ: ಉತ್ತಮ ಕಾರ್ಯಗಳ ಚಿಂತನೆ ನಡೆಸುವಾಗ ಕೇಳಿ ಬರುವ ಋಣಾತ್ಮಕ ಅಭಿಪ್ರಾಯಗಳ ಬಗ್ಗೆ ಯೋಚಿಸದೆ ಮುಂದುವರಿಯಬೇಕು. ಕೈಗೊಂಡ ಉದ್ದೇಶವನ್ನು ದಡ ಮುಟ್ಟಿಸುವ ಗುರಿಯೊಂದಿಗೆ ಸಾಗಿದರೆ ಕೆಲಸ ಪೂರ್ಣಗೊಳ್ಳುವುದು ನಿಶ್ಚಿತ ಎಂದು ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಕಡಿರುದ್ಯಾವರ ಗ್ರಾಮದ ಕುಚ್ಚೂರು ಬೈಲು ಶ್ರೀ ವನದುರ್ಗಾ ದೇವಿ ದೇವಸ್ಥಾನ ಹಾಗೂ ಪರಿವಾರ ದೈವ ದೇವರುಗಳ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಂಡಾಜೆಯ ಸದಾನಂದ ಬಿ.ಧಾರ್ಮಿಕ ಉಪನ್ಯಾಸ ನೀಡಿದರು. ಕಡಿರುದ್ಯಾವರ ಗ್ರಾಪಂ ಅಧ್ಯಕ್ಷ ಅಶೋಕ್ ಕುಮಾರ್, ಕೃಷಿಕ ಸೂರಜ್ ಅಡೂರು, ಎಸ್ ಕೆ ಡಿಆರ್ ಡಿಪಿ ಮೇಲ್ವಿಚಾರಕ ಜನಾರ್ದನ,ಕಾಟಾಜೆ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಎ. ಜಯದೇವ ಮುಖ್ಯ ಅರ್ಚಕ ಪ್ರೇಮಾನಂದ ಫಡ್ಕೆ, ಬಂಗಾಡಿ ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ, ಮಂಜುನಾಥ ಕಾಮತ್, ವಿಘ್ನೇಶ್ ಪ್ರಭು, ಸೂರಜ್ ವಳಂಬ್ರ, ಯತೀಂದ್ರ ಪೂಜಾರಿ, ಆನಂದ ಗೌಡ, ರಾಜೇಶ್ ಗೌಡ, ವನಿತಾ ಸಾಲಿಯಾನ್, ವರದಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಲೋಕೇಶ್ವರಿ ವಿನಯಚಂದ್ರ ಸ್ವಾಗತಿಸಿದರು. ಜನಾರ್ದನ ಕಾನರ್ಪ ಕಾರ್ಯಕ್ರಮ ನಿರೂಪಿಸಿದರು. ಭಾರತಿ ಹೆಬ್ಬಾರ್ ವಂದಿಸಿದರು.
ನೀಲೇಶ್ವರ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನದ ಶಿಲಾನ್ಯಾಸವನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ನೆರವೇರಿಸಿದರು. ಅಂದಾಜು 1 ಕೋಟಿ ರೂ ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿ,ತೀರ್ಥ ಮಂಟಪ,ತೀರ್ಥಭಾವಿ, ಸುತ್ತುಪೌಳಿ ಸೇರಿದಂತೆ ಕಾಮಗಾರಿ ನಡೆಯಲಿದೆ. 2023 ಫೆಬ್ರವರಿಯಲ್ಲಿ ಅಷ್ಟಬಂಧ ಬ್ರಹ್ಮಕಲಶ ನಡೆಸುವ ಯೋಜನೆ ರೂಪಿಸಲಾಗಿದೆ.