News Karnataka Kannada
Thursday, May 02 2024
ಮಂಗಳೂರು

ಕಡಿರುದ್ಯಾವರ ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ

Blt
Photo Credit :

ಬೆಳ್ತಂಗಡಿ: ಉತ್ತಮ ಕಾರ್ಯಗಳ ಚಿಂತನೆ ನಡೆಸುವಾಗ ಕೇಳಿ ಬರುವ ಋಣಾತ್ಮಕ ಅಭಿಪ್ರಾಯಗಳ ಬಗ್ಗೆ ಯೋಚಿಸದೆ ಮುಂದುವರಿಯಬೇಕು. ಕೈಗೊಂಡ ಉದ್ದೇಶವನ್ನು ದಡ ಮುಟ್ಟಿಸುವ ಗುರಿಯೊಂದಿಗೆ ಸಾಗಿದರೆ ಕೆಲಸ ಪೂರ್ಣಗೊಳ್ಳುವುದು ನಿಶ್ಚಿತ ಎಂದು ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಹೇಳಿದರು.

ಅವರು ಕಡಿರುದ್ಯಾವರ ಗ್ರಾಮದ ಕುಚ್ಚೂರು ಬೈಲು ಶ್ರೀ ವನದುರ್ಗಾ ದೇವಿ ದೇವಸ್ಥಾನ ಹಾಗೂ ಪರಿವಾರ ದೈವ ದೇವರುಗಳ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮುಂಡಾಜೆಯ ಸದಾನಂದ ಬಿ‌.ಧಾರ್ಮಿಕ ಉಪನ್ಯಾಸ ನೀಡಿದರು. ಕಡಿರುದ್ಯಾವರ ಗ್ರಾಪಂ ಅಧ್ಯಕ್ಷ ಅಶೋಕ್ ಕುಮಾರ್, ಕೃಷಿಕ ಸೂರಜ್ ಅಡೂರು, ಎಸ್ ಕೆ ಡಿಆರ್ ಡಿಪಿ ಮೇಲ್ವಿಚಾರಕ ಜನಾರ್ದನ,ಕಾಟಾಜೆ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಎ. ಜಯದೇವ ಮುಖ್ಯ ಅರ್ಚಕ ಪ್ರೇಮಾನಂದ ಫಡ್ಕೆ, ಬಂಗಾಡಿ ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ, ಮಂಜುನಾಥ ಕಾಮತ್, ವಿಘ್ನೇಶ್ ಪ್ರಭು, ಸೂರಜ್ ವಳಂಬ್ರ, ಯತೀಂದ್ರ ಪೂಜಾರಿ, ಆನಂದ ಗೌಡ, ರಾಜೇಶ್ ಗೌಡ, ವನಿತಾ ಸಾಲಿಯಾನ್, ವರದಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಲೋಕೇಶ್ವರಿ ವಿನಯಚಂದ್ರ ಸ್ವಾಗತಿಸಿದರು. ಜನಾರ್ದನ ಕಾನರ್ಪ ಕಾರ್ಯಕ್ರಮ ನಿರೂಪಿಸಿದರು. ಭಾರತಿ ಹೆಬ್ಬಾರ್ ವಂದಿಸಿದರು.

ನೀಲೇಶ್ವರ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನದ ಶಿಲಾನ್ಯಾಸವನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ನೆರವೇರಿಸಿದರು. ಅಂದಾಜು 1 ಕೋಟಿ ರೂ‌ ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿ,ತೀರ್ಥ ಮಂಟಪ,ತೀರ್ಥಭಾವಿ, ಸುತ್ತುಪೌಳಿ ಸೇರಿದಂತೆ ಕಾಮಗಾರಿ ನಡೆಯಲಿದೆ. 2023 ಫೆಬ್ರವರಿಯಲ್ಲಿ ಅಷ್ಟಬಂಧ ಬ್ರಹ್ಮಕಲಶ ನಡೆಸುವ ಯೋಜನೆ ರೂಪಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು