ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಪ್ರವರ್ತಿತ 6 ದಶಾವತಾರ ಯಕ್ಷಗಾನ ಮೇಳಗಳ ಈ ವರ್ಷದ ತಿರುಗಾಟದ ಕೊನೆಯ ಪತ್ತನಾಜೆ ಸೇವೆಯಾಟ ಜರುಗಿತ್ತು.
ಊರು ಪರವೂರುಗಳಲ್ಲಿ ತಿರುಗಾಟ ಮುಗಿಸಿದ ಎಲ್ಲಾ 6ಮೇಳಗಳ ಬಸ್ ಹಾಗೂ ಲಾರಿಗಳು ಹೂಗಳಿಂದ ಅಲಂಕರಿಸಲ್ಪಟ್ಟ ಧ್ವನಿವರ್ಧಕ ಮೂಲಕ ದೇವರ ಸುತ್ತಿ ಘೋಷಣೆಯೊಂದಿಗೆ ಕಟೀಲು ರಥಬೀದಿಗೆ ಬಂದು ಮೇಳದ ದೇವರನ್ನು ಮರಳಿ ಸ್ವಾಗತಿಸುವ ಮೂಲಕ ಪುರಪ್ರವೇಶದ ಸಂಭ್ರಮ ನಡೆಯಿತು .
ಈ ವೇಳೆ ಹಿಂದಿನ ದಿನದ ಸೇವಾಕರ್ತರು ಪಾಲ್ಗೊಂಡಿದ್ದರು .ಮಹಾಲಕ್ಷ್ಮಿ ಸದನದಲ್ಲಿ ಎಲ್ಲಾ 6ಮೇಳಗಳ ದೇವರ ಚೌಕಿ ಪೂಜೆ ನಡೆದು ರಾತ್ರಿ ಭವ್ಯವಾಗಿ ಅಲಂಕರಿಸಲಾದ 6ಮಂಟಪಗಳಲ್ಲಿ ಚೌಕಿ ಪೂಜೆ ನಡೆಯಿತು ಬಳಿಕ 6ರಂಗಸ್ಥಳದಲ್ಲೇ ದಶಾವತಾರ ಶ್ರೀನಿವಾಸ ಕಲ್ಯಾಣ ಯಕ್ಷಗಾನ ನಡೆಯಿತು .
ಬೆಳಿಗ್ಗೆ ದೇವಳದಲ್ಲಿ ದೇವರ ಸಾನಿಧ್ಯದಲ್ಲಿ ಕಲಾವಿದರ ಗೆಜ್ಜೆ ಬಿಚ್ಚುವ ಮುಖಾಂತರ ಪತ್ತನಾಜೆ ಕೊನೆಯ ಆಟ ಸಂಪನ್ನಗೊಂಡಿತ್ತು.