ಮಂಗಳೂರು :ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋನಲ್ಲಿ ಮಂಗಳೂರಿನ ಸಂದೇಶ್ ನೀರುಮಾರ್ಗ ಅವರು ರನ್ನರ್ಅಪ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಈ ರಿಯಾಲಿಟಿ ಶೋನಲ್ಲಿ ಅಂತಿಮ ಹಂತ ತಲುಪಿದ್ದ 6 ಸ್ಪರ್ಧಿಗಳ ಪೈಕಿ ನಾಲ್ವರು ಫೈನಲ್ ಪ್ರವೇಶಿಸಿದ್ದರು. ಅದರಲ್ಲಿ ಸಂದೇಶ್ ಮೊದಲಿಗರು. ಕೊನೆಯ ಎರಡು ಸ್ಥಾನದಲ್ಲಿ ಮೊದಲ ಸ್ಥಾನವನ್ನು ಬಳ್ಳಾರಿಯ ಚಿನ್ಮಯ್ ಅವರು ಪಡೆದರೆ ಎರಡನೇ ಸ್ಥಾನ ಸಂದೇಶ್ ನೀರುಮಾರ್ಗ ಅವರ ಪಾಲಾಗಿದೆ. ಇದರ ಜತೆ 5 ಲಕ್ಷ ರೂ. ನಗದು ಗೆದ್ದಿದ್ದಾರೆ.
ಈ ಕುರಿತು ಸಂದೇಶ್ ಅವರು ಉದಯವಾಣಿಗೆ ಪ್ರತಿಕ್ರಿಯಿಸಿ, “ಈ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಕ್ಕೆ ನನಗೆ ಹೆಮ್ಮೆ ಇದೆ. ಫೈನಲ್ ಪ್ರವೇಶಿಸಿದ್ದೇ ದೊಡ್ಡ ಸಾಧನೆ. ಶೋನಲ್ಲಿ ಭಾಗವಹಿಸಿ ಹಾಡುಗಾರಿಕೆಯ ಅನೇಕ ವಿಷಯಗಳನ್ನು ಕಲಿತೆ’ ಎಂದಿದ್ದಾರೆ.