ಬೆಳ್ತಂಗಡಿ: ಮುಂಡಾಜೆ ಗ್ರಾಮದ ಒಂಜರೆಬೈಲು ನಿವಾಸಿ ಹರ್ಷ ಭಟ್ ಎಂಬವರ ಮನೆಯಲ್ಲಿ ಶನಿವಾರ ತಡರಾತ್ರಿ ಕಳ್ಳತನ ನಡೆದಿದೆ.ಮುಂಬಾಗಿಲಿನ ಚಿಲಕ ತೆಗೆದು ಒಳ ಪ್ರವೇಶಿಸಿದ ಕಳ್ಳರು ಆರು ಪವನ್ ಚಿನ್ನ ಹಾಗೂ 14 ಸಾವಿರ ರೂಪಾಯಿ ನಗದು ದೋಚಿದ್ದಾರೆ.
ರಾತ್ರಿ 2 ಗಂಟೆ ಸುಮಾರಿಗೆ ಮನೆಮಂದಿಗೆ ಎಚ್ಚರವಾದಾಗ ಮುಂಬಾಗಿಲ ಸಮೀಪ ಓರ್ವ ಕಂಡುಬಂದಿದ್ದು ಆಗ ಮನೆಮಂದಿ ಬೊಬ್ಬೆ ಹೊಡೆದಾಗ ಓಡಿ ಹೋಗಿದ್ದಾನೆ.
ಮನೆಯಲ್ಲಿ ಒಟ್ಟು 5ಜನ ಇದ್ದು,2 ಬೆಡ್ ರೂಮ್ ಗಳಲ್ಲಿ ಮಲಗಿದ್ದರು. ಇನ್ನೊಂದು ಬೆಡ್ ರೂಮಿಗೆ ನುಗ್ಗಿದ ಕಳ್ಳರು ಅದೇ ರೂಮಿನಲ್ಲಿದ್ದ ಕಪಾಟಿನ ಬೀಗದ ಕೈ ಉಪಯೋಗಿಸಿ ನಗ ನಗದು ದೋಚಿದ್ದಾರೆ.
ಈ ಮನೆಯು ಮುಂಡಾಜೆಯಿಂದ ಕಲ್ಮಂಜ ಮೂಲಕ ಧರ್ಮಸ್ಥಳಕ್ಕೆ ಹೋಗುವ ಹೆದ್ದಾರಿಯ ತೀರಾ ಸಮೀಪದಲ್ಲಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಿ ಎಸ್ ಐ ಕೃಷ್ಣಕಾಂತ ಪಾಟೀಲ್ ನೇತೃತ್ವದ ತಂಡ ತನಿಖೆ ಕೈಗೊಂಡಿದೆ.ಪೋಲಿಸ್ ಶ್ವಾನವು ಮನೆಯಿಂದ 500 ಮೀ.ದೂರದವರೆಗೆ ಮುಖ್ಯರಸ್ತೆಯಲ್ಲಿ ಕ್ರಮಿಸಿ ವಾಪಸಾಗಿದೆ.