News Karnataka Kannada
Saturday, May 11 2024
ಮಂಗಳೂರು

ಉತ್ತಮ ಜವಾಬ್ದಾರಿಯುತ ನಾಗರಿಕರಾಗುವುದೇ ಸರ್ವಶ್ರೇಷ್ಠ ದೇಶಸೇವೆ: ಎನ್. ಶಶಿಕುಮಾರ್

Sdm
Photo Credit : News Kannada

ಬೆಳ್ತಂಗಡಿ : ಸಮಾಜದಲ್ಲಿ ಉತ್ತಮ ಜವಾಬ್ದಾರಿಯುತ ನಾಗರಿಕರಾಗಿ ಗುರುತಿಸಿಕೊಳ್ಳುವುದೇ ದೇಶಕ್ಕೆ ಮಾಡುವ ಅತ್ಯಂತ ಸೂಕ್ತ, ಸರ್ವಶ್ರೇಷ್ಠ ಸೇವೆ. ಬರಿಯ ಮಾತಿನಿಂದ ದೇಶದ ಉದ್ಧಾರ ಸಾಧ್ಯವಿಲ್ಲ ಎಂದು ಮಂಗಳೂರು ನಗರ ಪೋಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.

ಉಜಿರೆಯ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನ ಬಿ.ವೊಕ್ ವಿಭಾಗವು ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಭಾಂಗಣದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಪದಾಧಿಕಾರಿಗಳ ಸಂಘ ಮತ್ತು ವಿದ್ಯಾರ್ಥಿಗಳ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಗರಿಕರು ಜಾಗೃತರಾದಾಗ ಪ್ರಬುದ್ಧ ಸಮಾಜದ ನಿರ್ಮಾಣ ಕಷ್ಟವಲ್ಲ. ವಯಕ್ತಿಕ ಜವಾಬ್ದಾರಿಗಳನ್ನು ಅರಿತು ಬದುಕಿನ ನಿರ್ವಹಣೆಗೆ ಅಗತ್ಯ ಕೌಶಲ್ಯಗಳನ್ನು ರೂಢಿಸಿಕೊಂಡಾಗ ವೃತ್ತಿಜೀವನದಲ್ಲೂ ಯಶಸ್ಸು ಗಳಿಸಬಹುದು. ಇದಕ್ಕಾಗಿ ಶಿಸ್ತು, ಸಂಯಮ ಮತ್ತು ಉದ್ದೇಶದ ಕಡೆಗೆ ನಿರಂತರ ಪ್ರಯತ್ನ ಅಗತ್ಯ. ಕೇವಲ ಮಾತಿನಿಂದ ಸಾಧನೆಗಳು ಸಾಧ್ಯವಿಲ್ಲ. ಕಲಿಕೆಯ ಅನಿವಾರ್ಯತೆ ಮತ್ತು ಅರಿವು ಉನ್ನತ ಸಾಧನೆಯತ್ತ ಪ್ರೇರೇಪಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿ ಸಮರ್ಥರಾಗುವ ಕಡೆಗೆ ಶ್ರಮಿಸಬೇಕು. ಹಾಗಾದಾಗ ಯಶಸ್ಸು ನಿಚ್ಚಳವಾಗಿ ಹಿಂಬಾಲಿಸುತ್ತದೆ. ಬದುಕಿನ ಆಯ್ಕೆಗಳ ಬಗ್ಗೆ ಸ್ಪಷ್ಟತೆಯಿರುವುದು ಅತ್ಯಗತ್ಯ. ಜ್ಞಾನ, ಕೌಶಲ್ಯ ಮತ್ತು ಅವಕಾಶಗಳ ಪರಸ್ಪರ ಹಂಚಿಕೆಯಿಂದ ಸತ್ವಯುತ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಸಮಯವನ್ನು ಗೌರವಿಸುವುದು ಮತ್ತು ಗುರಿ ಸಾಧನೆಯ ಹಸಿವಿನೊಂದಿಗೆ ಅವಿರತ ಶ್ರಮಿಸುವುದು ಯಶಸ್ಸಿನ ನೈಜ ಸಾರಥಿಗಳು ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಡಾ.ಎಸ್.ಸತೀಶ್ಚಂದ್ರ, ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಗಳ ಅರಿವು ಭವಿಷ್ಯದ ಸಮಾಜದ ಬೆಳವಣಿಗೆಯನ್ನು ನಿರ್ಧರಿಸುತ್ತವೆ. ಯಶಸ್ಸಿನ ಪಥದಲ್ಲಿ ನಿರಂತರ ಪರಿಶ್ರಮ ಮತ್ತು ಸೃಜನಶೀಲ ಚಿಂತನೆಗಳ ಪಾಲು ನಿರ್ಣಾಯಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿ.ವೋಕ್ ನ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್, ರಿಟೈಲ್ ಮತ್ತು ಸಪ್ಲೈ ಚೈನ್ ಮನೇಜ್ಮೆಂಟ್, ಸಾಫ್ಟ್ವೇರ್ ಮತ್ತು ಆ್ಯಪ್ ಡೆವೆಲಪ್ಮೆಂಟ್ ವಿಭಾಗಗಳ ವಿದ್ಯಾರ್ಥಿಗಳ ವಿವಿಧ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಅನಾವರಣಗೊಳಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಎನ್. ಉದಯಚಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಸ್.ಡಿ.ಎಂ.ಇ ಸೊಸೈಟಿಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್. ಎಂ.ವೈ ಉಪಸ್ಥಿತರಿದ್ದರು. ಬಿ.ವೋಕ್ ವಿಭಾಗದ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಭಾಗದ ಸಂಯೋಜಕ ಸುವೀರ್ ಜೈನ್ ವಂದಿಸಿದರೆ, ವಿದ್ಯಾರ್ಥಿನಿ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು