ಮಂಗಳೂರು: ಕಣ್ಣೂರು ಮೈದಾನದಲ್ಲಿ ಎಸ್ಡಿಪಿಐ ಏರ್ಪಡಿಸಿದ ‘ಬ್ರಹತ್ ಜನಾಧಿಕಾರ ಸಮಾವೇಶ’ದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತನೊಬ್ಬ ಪೊಲೀಸರನ್ನು ನಾಯಿಗೆ ಹೋಲಿಸಿ ನಿಂದಿಸಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿಗಳಿಗೆ ಶೋಧ ನಡೆಯುತ್ತಿದೆ.
ಆರೋಪಿಗಳು: A1 ಅಪರಿಚಿತ KTM ಬೈಕ್ ಸವಾರ A2 ಅಪರಿಚಿತ KTM ಬೈಕ್ ಹಿಂಬದಿಯ ಸವಾರ A3.ಅಪರಿಚಿತ ಸ್ಕೂಟರ್ ಸವಾರ A4 ಅಪರಿಚಿತ ಸೂಟರ್ ಹಿಂಬದಿಯ ಸಹ ಸವಾರ A5.ಅಪರಿಚಿತ ಕಾರು ಚಾಲಕ 46.ಇತರರು
ಮೇ.27ರಂದು ಕಣ್ಮರು ಗ್ರಾಮದ ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ ಮೈದಾನದಲ್ಲಿ ಎಸ್.ಡಿ.ಪಿ.ಐ ಪಕ್ಷವು ಆಯೋಜಿಸಿದ್ದ ಜನಾಧಿಕಾರ ಕಾರ್ಯಕ್ರಮದ ಬಂದೋಬಸ್ತ್ ಬಗ್ಗೆ ಕೊಡೆಕ್ಕಲ್ ಕಣ್ಣೂರು ಬ್ಯಾರಿಕೆಡ್ ಚೆಕ್ ಪೋಸ್ಟ್ ನಲ್ಲಿ ನಾಲ್ವರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪಡೀಲ್ ಕಡೆಯಿಂದ ಬಂದ ಕೆ.ಟಿ.ಎಂ ಬೈಕ್ ನ ನವಾರ ಹಾಗೂ ಸಹ ಸವಾರ, ಸ್ಕೂಟರ್ ನ ಸವಾರ ಹಾಗೂ ಸಹಸವಾರ ಮತ್ತು ಕಾರ್ ನಲ್ಲಿದ್ದ ಸವಾರ ಹಾಗೂ ಇತರರು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯನ್ನು ಉದ್ದೇಶಿಸಿ ಬ್ಯಾರಿ ಭಾಷೆಯಲ್ಲಿ, “ಪೋಡಾ ಪುಲ್ಲೇ ಪೊಲೀಸ”, “ನಾಯಿಂಡ ಮೋನ ಪೊಲೀಸ” ಎಂದು ನಿಂದಿಸುತ್ತಾ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸಿಕೊಂಡು ಕರ್ತವ್ಯದಲ್ಲಿದ್ದ ಒರ್ವ ಸಿಬ್ಬಂದಿ ಮೈಮೇಲೆ ಹಾಯಿಸುವಂತೆ ಬಂದಾಗ ಸಿಬ್ಬಂದಿ ಪಕ್ಕಕ್ಕೆ ಹಾರಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಜೊತೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ದೂರಿನಲ್ಲಿ ವಿವರಿಸಲಾಗಿದೆ.