News Karnataka Kannada
Sunday, May 05 2024
ಮಂಗಳೂರು

ಉಜಿರೆ: ಜಾಗದ ವಿಷಯವಾಗಿ ಮರಾಠಿ ಕುಟುಂಬಗಳ ನಡುವೆ ವಿವಾದ

Ujire (4)
Photo Credit :

ಬೆಳ್ತಂಗಡಿ : ಮರಾಠಿ ಸಮುದಾಯವು ಎಲ್ಲರೂ ಒಗ್ಗೂಡಿ ಅನ್ಯೋನತೆಯಿಂದ ಜೀವಿಸುವ ಕುಟುಂಬವಾಗಿದೆ. ಇತ್ತೀಚೆಗೆ ಉಜಿರೆ ಗುರಿಪಳ್ಳ ಸಮೀಪದ ಅಳಕೆ ಎಂಬಲ್ಲಿ ಜಾಗದ ವಿಷಯವಾಗಿ ಮರಾಠಿ ಕುಟುಂಬಗಳ ನಡುವೆ ವಿವಾದಗಳು ಬಂದಿದ್ದು ಇದು ಪೋಲೀಸ್ ಠಾಣೆಯಲ್ಲಿ ಬಗೆಹರಿದ ಘಟನೆಯಾಗಿದೆ. ಈ ಘಟನೆಗೆ ಸಂಬಂಧಿಸಿ ಬಿ.ಎಂ ಭಟ್ ಮತ್ತು ಈಶ್ವರಿ ಎಂಬವರು ಮಧ್ಯಪ್ರವೇಶಿಸಿ ಮರಾಠಿ ಕುಟುಂಬದ ನಡುವೆ ದ್ವೇಷ ಬರುವಂತೆ ಮಾಡಿದ್ದು ಇದನ್ನು ಖಂಡಿಸುವುದಲ್ಲದೆ ಮುಂದೆ ಈ ವಿಚಾರವಾಗಿ ಬಂದರೆ ಇಡೀ ಮರಾಠಿ ಸಮಾಜ ಪ್ರತಿಭಟನೆ ನಡೆಸುತ್ತೇವೆ ಎಂದು ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಅತ್ತಾಜೆ ಹೇಳಿದ್ದಾರೆ.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿ.ಎಂ.ಭಟ್ ಎಂಬುವರು ವಿವಾದವನ್ನು ಸೃಷ್ಠಿ ಮಾಡಿದ ಕಾರಣ ಇಂದು ಅಮಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದೆ.

ಇವರ ಕುಟುಂಬದಲ್ಲಿ ಮಕ್ಕಳು ಮತ್ತು ದನ ಕರುಗಳು ಇದ್ದು ಇವರನ್ನು ನೋಡುವ ಗತಿ ಇಲ್ಲದಾಗಿದೆ. ಮುಂದಿನ ದಿನಗಳಲ್ಲಿ ಮರಾಠಿ ಕುಟುಂಬಗಳ ಮಧ್ಯೆ ಯಾವುದೇ ಸಮಸ್ಯೆ ಬಂದಲ್ಲಿ ಸಮುದಾಯದ ಮುಖಂಡರು ಸೇರಿ ಬಗೆಹರಿಸಲಿದ್ದೇವೆ. ಈಗ ಅಳಕ್ಕೆ ಎಂಬಲ್ಲಿರುವ ಕುಟುಂಬಗಳ ಮದ್ಯೆ ನಡೆಯುತ್ತಿರುವ ಜಾಗದ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಸರಿಪಡಿಸಲಾಗುವುದು.

ಜಾಗದ ಸಮಸ್ಯೆ ಅಲ್ಲದೆ ಬೇರೆ ಯಾವುದೇ ಸಮಸ್ಯೆ ಬಂದರೂ ಕೂಡ ಪರಿಹರಿಸಲಾಗುವುದು. ಬಿ.ಎಂ ಭಟ್ ಎಂಬವರು ಅನೀಲ್ ಎಂಬವರ ವಿರುದ್ಧ ಸೇಡು ತೀರಿಸುವ ಸಲುವಾಗಿ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದು ಅವರು ಅವರದೇ ಸಮಾಜದ ಬಗ್ಗೆ ನೋಡಿಕೊಳ್ಳಲಿ. ಅದರಂತೆ ಈಶ್ವರಿ ಎಂಬವರು ಕೂಡ ಅವರ ಸಮಾಜದ ಬಗ್ಗೆಯೇ ನೋಡಿಕೊಳ್ಳಲಿ ನಮ್ಮ ಸಮಾಜದ ಬಗ್ಗೆ ಮುಂದೆ ಮಧ್ಯಪ್ರವೇಶಿಸಿದರೆ ನಾವೇ ತಕ್ಕ ಶಾಸ್ತಿ ಮಾಡಲಿದ್ದೇವೆ ಎಂದರಲ್ಲದೆ ಇಲ್ಲಿ ಮರಾಠಿ ಸಮುದಾಯವನ್ನು ಆದಿವಾಸಿಗಳೆಂದು ಬಿಂಬಿಸಿರುವುದು ತಪ್ಪು ಎಂದರು.

ಗೊಷ್ಠಿಯಲ್ಲಿ ಮರಾಠಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಲಿಂಗಪ್ಪ ನಾಯ್ಕ್, ಮುಖಂಡ ವಸಂತ ಉಜಿರೆ , ಸಂದೇಶ್ ಗುರಿಪಳ್ಳ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು