ಬಂಟ್ವಾಳ: ಉಳಿ ಗ್ರಾ.ಪಂ.ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಳಿ ಇವರ ಜಂಟಿ ಆಶ್ರಯದಲ್ಲಿ ಉಳಿ ಗ್ರಾ.ಪಂ.ಸಭಾ ಭವನದಲ್ಲಿ ಉಚಿತ ಅಂಬ್ಯುಲೆನ್ಸ್ ನ ಉದ್ಘಾಟನೆ ಸಮಾರಂಭ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಜನರ ಆರೋಗ್ಯವೇ ನನಗೆ ಮುಖ್ಯ ವಾಗಿದ್ದು, ತಾಲೂಕಿನ ಪ್ರತಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು, ತಾಲೂಕಿನ ಬಹುತೇಕ ಎಲ್ಲಾ ಆಸ್ಪತ್ರೆ ಗಳಲ್ಲಿ ಆರೋಗ್ಯ ರಕ್ಷಣೆಗೆ ಬೇಕಾದ ಆಧುನಿಕ ತಂತ್ರಜ್ಞಾನದ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಿದ್ದು, ಜೊತೆಗೆ ಕೊರತೆಯಿರುವ ವೈದ್ಯರು ಗಳ ನೇಮಕ ಮಾಡಲಾಗಿದೆ ಎಂದರು.
ವೇದಿಕೆಯಲ್ಲಿ ಬೂಡ ಆದ್ಯಕ್ಷ ದೇವದಾಸ್ ಶೆಟ್ಟಿ,ಗ್ರಾ.ಪಂ ಅಧ್ಯಕ್ಷ ಸುರೇಶ್ ಮೈರ, ಉಪಾಧ್ಯಕ್ಷ ಚಿದಾನಂದ ರೈ ಕಕ್ಯೆ, ಗ್ರಾ.ಪಂ.ಸದಸ್ಯರಾದ ವಸಂತ ಸಾಲಿಯಾನ್, ಚೇತನ್ ಪೂಜಾರಿ, ಸಂಜೀವ ಗೌಡ, ರೇವತಿ, ಗುಲಾಬಿ, ಶಾಂತ, ವಿಶಾಲಾಕ್ಷಿ, ರಕ್ಷಿತಾ, ಶಾರದ, ಕಕ್ಯೆಬೀಡು ಶ್ರೀ ಪಂಚ ದುರ್ಗಾ ದೇವಿ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ! ಸತ್ಯಶಂಕರ್ ಶೆಟ್ಟಿ, ಗೋಪಾಲಕೃಷ್ಣ ದೇವಸ್ಥಾನ ದ ಅಧ್ಯಕ್ಷ ವಿಠಲರಾಜ್ ಬರ್ಕಟ, ಉಳಿ ಸಹಕಾರಿ ಬ್ಯಾಂಕ್ ನಿರ್ದೇಶಕ ರಂಜಿತ್ ಮೈರ, ಪ್ರಮುಖರಾದ ಗಣೇಶ್ ಕೋಗುಜೆ, ಡೀಕಯ್ಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಉಪತಹಶೀಲ್ದಾರ್ ಪದೋನ್ನತಿ ಹೊಂದಿದ ನವೀನ್ ಬೆಂಜನಪದವು ಅವರನ್ನು ಕಾರ್ಯಕ್ರಮ ದಲ್ಲಿ ಅಭಿನಂದಿಸಲಾಯಿತು. ಉಳಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಮೈರ, ಸ್ವಾಗತಿಸಿ, ಉಪಾಧ್ಯಕ್ಷ ಚಿದಾನಂದ ರೈ ಕಕ್ಯ ವಂದಿಸಿದರು.