News Karnataka Kannada
Thursday, May 02 2024
ಮಂಗಳೂರು

ಕೋವಿಡ್ ನಿಯಮ ಉಲ್ಲಂಘಹಿಸಿದ ಪ್ರತಿಭಟನೆಕಾರರ ವಿರುದ್ಧ ಕೇಸ್

Corona Main Newsk 5059978686
Photo Credit :
ಬಂಟ್ವಾಳ : ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಮಿನಿ ವಿಧಾನಸೌಧಕ್ಕೆ ಸುಮಾರು 50ರಿಂದ 60 ಜನರಿದ್ದ ಗುಂಪೊಂದು ಯಾವುದೇ ಪೂರ್ವಾನುಮತಿ ಪಡೆಯದೆ, ಭದ್ರತೆಗೆ ಅವಕಾಶ ನೀಡದೆ ಪ್ರವೇಶಿಸಿ, ನಿತ್ಯಕಾರ್ಯಗಳಿಗೆ ತೊಂದರೆ ಉಂಟು ಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದ್ದಾಗಿ ಹಾಗೂ ಕೋವಿಡ್ ನಿಯಮ ಉಲ್ಲಂಘಿಸಿರುವುದಾಗಿ ಆರೋಪಿಸಿ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ದೂರು ನೀಡಿದನ್ವಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಸೀಲ್ದಾರ್ ರಶ್ಮಿ ಎಸ್.ಆರ್ ಈ ಕುರಿತು ದೂರು ನೀಡಿದ್ದು, ಆಗಸ್ಟ್ 31ರಂದು ಬೆಳಿಗ್ಗೆ 11.30 ಗಂಟೆಗೆ ಬಿ ಮೂಡ ಗ್ರಾಮದ ಬಿ ಸಿ ರೋಡಿನ ತಾಲೂಕು ಆಫೀಸ್ ನಲ್ಲಿ ಕೋವಿಡ್-19 ಕ್ಕೆ ಸಂಬಂಧಪಟ್ಟಂತೆ ವ್ಯಾಕ್ಸಿನ್ ಹಾಗೂ ಕಾರ್ಮಿಕ ವರ್ಗದವರಿಗೆ ಉಚಿತ್ ಕಿಟ್ ವಿತರಿಸಲ್ಪಡುವ ಸಂದರ್ಭದಲ್ಲಿ ಏಕಪಕ್ಷೀಯವಾದ ರ್ತಿರ್ಮಾನಗಳನ್ನು ತೆಗೆದುಕೊಂಡು ದುರುಪಯೋಗಪಡಿಸಲಾಗುತ್ತಿದೆ ಎಂಬ ಆರೋಪವನ್ನು ಇಟ್ಟುಕೊಂಡು ಸುಮಾರು 50 ರಿಂದ 60 ಜನರಿದ್ದ ಗುಂಪೂಂದು ಯಾವುದೇ ಪುರ್ವಾನುಮತಿಯನ್ನು ಪಡೆದುಕೊಳ್ಳದೇ ಹಾಗೂ ಭದ್ರತೆಗೆ ಅವಕಾಶಗಳನ್ನು ನೀಡದೇ ಏಕಾಏಕಿಯಾಗಿ ಸಾರ್ವಜನಿಕ ಕಚೇರಿಗಳುಳ್ಳ ಬಂಟ್ವಾಳ ಮಿನಿ ವಿಧಾನ (ತಾಲೂಕು ಆಫೀಸ್) ಒಳ ಆವರಣಕ್ಕೆ ಪ್ರವೇಶಿಸಿದ್ದಲ್ಲದೇ ಫೋಷಣೆಗಳನ್ನು ಕೂಗುತ್ತ,  ತಾಲೂಕು ಕಚೇರಿಯನ್ನೊಳಗೊಂಡಂತೆ ಇತರ ಕಚೇರಿಗಳ ದಿನನಿತ್ಯದ ಕೆಲಸ-ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡಿರುವುದಲ್ಲದೇ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸದೆ ಹಾಗೂ ಸದ್ರಿ ಕಛೇರಿಯ ಆವರಣದಲ್ಲಿದ್ದ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟಾಗಿದ್ದು ಕಂಡು ಬರುತ್ತದೆ.
ಪ್ರತಿಭಟನೆಯ ಸಂದರ್ಭದಲ್ಲಿ ಆರೋಪಿತರು ಸರಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ಹಾಗೂ ಪರಿಷ್ಕೃತ ಆದೇಶಗಳನ್ನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಅಕ್ರ: 103/2021 ಕಲಂ: 143, 147, 427, 269, 270 ಜೊತೆ 149 ಐಪಿಸಿ ಹಾಗೂ ಕಲಂ: 5 (1)  ಕರ್ನಾಟಕ ಸಾಂಕ್ರಾಮಿಕ ರೋಗಗಳ ಆಧ್ಯಾದೇಶ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು