ಮಂಗಳೂರು: ಮಹಾಕಾಳಿ ಪಡ್ಪೂ ನಿಂದ ರಾಷ್ಟ್ರೀಯ ಹೆದ್ದಾರಿ ಗೆ ಸಂಪರ್ಕ ರಸ್ತೆಯು ಕಳೆದ ಒಂದು ತಿಂಗಳಿನಿಂದ ತೀರಾ ದುಸ್ಥಿತಿಯಲ್ಲಿದ್ದರೂ ಸ್ಥಳೀಯ ಪ್ರತಿನಿಧಿಗಳು, ಮೇಯರ್, ಶಾಸಕರು ಭೇಟಿ ನೀಡಿ, ದುರಸ್ತಿ ಗೊಳಿಸದೆ ದಸರಾ ಸಂದರ್ಭದಲ್ಲಿ ಜನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗದೆ ಇರುವುದು ನಗರ ಪಾಲಿಕೆಯ ಆಡಳಿತ ವೈಫಲ್ಯ ದ ಕೈಗನ್ನಡಿ ಎಂದು ಮಾಜಿ ಶಾಸಕರಾದ ಐವನ್ ಡಿಸೋಜಾ ರವರು ಸ್ಥಳೀಯರ ಅಪೇಕ್ಷೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟಿಸಿದರು. ಮತ್ತು ನಗರ ಪಾಲಿಕೆ ಯ ಕಮಿಷನರ್, ಜಿಲ್ಲಾಧಿಕಾರಿ ಯವರಿಗೆ ಫೋನ್ ಮೂಲಕ ಸಂಪರ್ಕಿಸಿ, ರಸ್ತೆ ದುರಸ್ತಿ ಯನ್ನು ಕೈಗೊಳ್ಳಬೇಕೆಂದು ಸೂಚಿಸಿದರು. ಇಲ್ಲದೇ ಇದ್ದಲ್ಲಿ ತೀವ್ರತರದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಭಾಸ್ಕರ್ ರಾವ್, ಪಿಯುಸ್ ಮೊಂತೇರೋ, ಆಲಿಸ್ಟ ನ್, ಬಾಜಿಲ್, ನವಾಜ್ ಜೆಪ್ಪು, ಸಲೀಂ, ಆಸೀಪ್ ಪಟ್ನ, ಅಜಮಾಲ್ ಅಮೀರ್, ಲತೀಫ್, ರೋಶನ್ ಉಪಸ್ಥಿತರಿದ್ದರು.
ಮಹಾಕಾಳಿ ಪಡ್ಪು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ ದುರಸ್ತಿ ಗೆ ಒತ್ತಾಯ, ಐವನ್ ನೇತ್ರ ತ್ವದಲ್ಲಿ ಸಾರ್ವಜನಿಕ ಪ್ರತಿಭಟನೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.