ಮಂಗಳೂರು : ಅಕ್ರಮವಾಗಿ ನಿಷೇಧಿತ ಅಂಬರ್ ಗ್ರೀಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ 6ಜನರನ್ನು ಬಂಧಿಸಿ ಅಪಾರ ಮೌಲ್ಯದ ಅಂಬರ್ ಗ್ರೀಸ್ ಅನ್ನು ವಶಪಡಿಸಿಕೊಂಡ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ .
ಬಂಟ್ವಾಳ ತಾಲ್ಲೂಕು ಬಾಳೆಪುಣಿ ಗ್ರಾಮದ ನವೋದಯ ಶಾಲೆಯ ಬಳಿ ನಿಷೇಧಿತ ಅಕ್ರಮ ಅಂಬರ್ ಗ್ರೀಸ್ ಮಾರಾಟ ಮಾಡಲು ಬಂದಿದ್ದ ಬೆಂಗಳೂರು ಮತ್ತು ಉಡುಪಿ ಮೂಲದ 6ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ .ಬಂಧಿತರನ್ನು ಪ್ರಶಾಂತ್ , ಸತ್ಯರಾಜ್, ರೋಹಿತ್ , ರಾಜೇಶ್ , ವಿರುಪಾಕ್ಷ , ನಾಗರಾಜ್ ಎಂದು ಗುರುತಿಸಲಾಗಿದ್ದು ಬಂಧಿತರಿಂದ 3 ಪಾಯಿಂಟ್ ನಲವತ್ತ್ 8ಕೋಟಿ ಮೌಲ್ಯದ 3ಕೆಜಿ ನಾನ್ ನೂರ ಎಂಬತ್ತು ಗ್ರಾಂ ತೂಕದ ಅಂಬರ್ ಗ್ರೀಸ್ ಅನ್ನು ವಶಪಡಿಸಲಾಗಿದೆ .
ನಿಷೇಧಿತ ಅಂಬರ್ ಗ್ರೀಸ್ ಅನ್ನು ತಮಿಳುನಾಡು ಮೂಲದ ಮೀನುಗಾರ ಸೇದು ಮಾಣಿಕ್ಯ ಎಂಬವರು ನೀಡಿದ್ದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗರ ಮುಂದಾಳುತ್ವದಲ್ಲಿ ಉಪನಿರೀಕ್ಷಕರಾದ ಶರಣಪ್ಪ ಭಂಡಾರಿ ಮತ್ತು ಮಲ್ಲಕಾರ್ಜುನ ಬಿರಾದಾರ ಎಎಸ್ ಐ ರವರಾದ ಮೋಹನ್ ದೇರಳಕಟ್ಟೆ ಸಂಜೀವ ಹಾಗೂ ಸಿಬ್ಬಂದಿಗಳಾದ ಅಶೋಕ್ ಶಿವಕುಮಾರ್ ಪುರುಷೋತ್ತಮ ದೀಪಕ್ ಅಂಬರೀಷ್ ಭಾಗಿಯಾಗಿದ್ದರು.