ಮಂಗಳೂರು : ತಲಪಾಡಿ ಗ್ರಾಮದ ನಾರ್ಲ ಪಡೀಲ್ ಸಮೀಪದ ರಾಮನಗರ ಎಂಬಲ್ಲಿಂದ ಕಾರಿನಲ್ಲಿ ಮಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಕಾಸರಗೋಡು ಹೊಸಂಗಡಿ ಮಜಿಬೈಲು ನಿವಾಸಿ ಪ್ರಫುಲ್ ರಾಜ್ ಮತ್ತು ಬಂಟ್ವಾಳ ಅವಿನಾಶ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 2ಪಾಯಿಂಟ್ ಇನ್ನೂರ ಕೆಜಿ ಗಾಂಜಾ 1200ನಗದು 2ಮೊಬೈಲ್ ಫೋನ್ ಮಾರುತಿ ಸಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳ ಸೊತ್ತಿನ ಮೌಲ್ಯ 5ಲಕ್ಷ ಐವತ್ತು ಸಾವಿರದ ನಾನೂರು₹ಎಂದು ಅಂದಾಜಿಸಲಾಗಿದೆ.
ಆರೋಪಿಗಳ ಪೈಕಿ ಅವಿನಾಶ್ ಈ ಹಿಂದೆ ಕದ್ರಿಯಲ್ಲಿ ಸರಕಾರಿ ವಾಹನ ಹಾನಿಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದನು ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ಎಸ್ಸೈ ರಾಜೇಂದ್ರ ಪ್ರದೀಪ್ ಟಿ ಆರ್ ಮತ್ತಿತರರು ಪಾಲ್ಗೊಂಡಿದ್ದರು.