News Karnataka Kannada
Sunday, April 28 2024
ವಿಶೇಷ

ಮಂಗಳೂರು: ಆಗಸ್ಟ್ 1ರಿಂದ ಆಳ ಸಮುದ್ರ ಮೀನುಗಾರಿಕೆ ಆರಂಭ

Mangaluru: Deep sea fishing to begin from August 1
Photo Credit : Wikimedia

ಮಂಗಳೂರು: ಕರಾವಳಿಯಲ್ಲಿ ಸುಮಾರು 2 ತಿಂಗಳ ಕಾಲ ಸ್ಥಗಿತಗೊಂಡಿದ್ದ ಮೀನುಗಾರಿಕೆ ಆಗಸ್ಟ್ 1ರಂದು ಮತ್ತೆ ಆರಂಭಗೊಳ್ಳಲಿದ್ದು, ಮೀನುಗಾರರು ಭರದ ಸಿದ್ಧತೆ ನಡೆಸಿದ್ದಾರೆ.

ಪ್ರಸ್ತುತ ಮೀನುಗಾರಿಕೆ ಹಂಗಾಮದಲ್ಲಿ ಉತ್ತಮ ಫಸಲಿನ ನಿರೀಕ್ಷೆಯೊಂದಿಗೆ ಕಡಲಿಗಿಳಿಯಲು ಮೀನುಗಾರರು ಸಿದ್ಧತೆ ಮಾಡಿಕೊಂಡಿದ್ದಾರೆ. ಸಮುದ್ರದಲ್ಲಿ ಮತ್ಸ್ಯ ಸಂಪತ್ತು ಹೇರಳವಾಗಿ ದೊರೆಯುವಂತೆ ಮತ್ತು ಯಾವುದೇ ಅವಘಢ ಸಂಭವಿಸದಂತೆ ಸಮುದ್ರರಾಜ ಹಾಗೂ ತಮ್ಮ ಇಷ್ಟದೇವರಲ್ಲಿ ಮೊರೆ ಹೋಗಿದ್ದಾರೆ.

ಮೀನು ಮೊಟ್ಟೆ ಇಡುವ ಸಮಯದಲ್ಲಿ ಮೀನುಗಾರಿಕೆಗೆ ಕರಾವಳಿಯಲ್ಲಿ ನಿಷೇಧವಿರುತ್ತದೆ. ಕಡಲಿನಲ್ಲಿ ಮತ್ಸ್ಯ ಸಂಪತ್ತಿನ ವೃದ್ಧಿಯ ಆಶಯ ಈ ನಿಷೇಧದ ಉದ್ದೇಶವಾಗಿದೆ. ಮೀನುಗಾರಿಕೆ ಸ್ಥಗಿತ ಸಮಯದಲ್ಲಿ ಯಾಂತ್ರೀಕೃತ ದೋಣಿಯ ಮೂಲಕ ಆಳ ಸಮುದ್ರ ಮೀನುಗಾರಿಕೆ ನಡೆಸುವುದಕ್ಕೆ ನಿಷೇಧವಿರುತ್ತದೆ. ಆದರೆ ನಾಡದೋಣಿ ಮೂಲಕ ಸಮುದ್ರ ಮೀನುಗಾರಿಕೆಗೆ ಅವಕಾಶವಿರುತ್ತದೆ.

ಮೀನುಗಾರಿಕೆ ನಿಷೇಧ ಸಮಯದಲ್ಲಿ ಸಾಮಾನ್ಯವಾಗಿ ಮೀನಿನ ರೇಟ್ ಜಾಸ್ತಿಯಾಗುತ್ತದೆ. ಕೆಜಿಗೆ 200 ರೂಪಾಯಿಗೆ ಸಿಗುವ ಬಂಗುಡೆ ಮೀನು ಕೆಜಿಗೆ 400ರಿಂದ 450 ರೂಪಾಯಿ ಆಗುತ್ತದೆ. ಉಳಿದ ಮೀನಿನ ಮಾರುಕಟ್ಟೆ ಮೌಲ್ಯ ಕೂಡ ಡಬಲ್ ಆಗುತ್ತದೆ. ಆಳ ಸಮುದ್ರ ಮೀನುಗಾರಿಕೆ ನಿಷೇಧ ಸಮಯದಲ್ಲಿ ನದಿ, ಹೊಳೆ, ತೋಡು, ಕೆರೆ ಮೀನುಗಾರಿಕೆಗೆ ಬಹಳ ಬೇಡಿಕೆ ಇರುತ್ತದೆ. ಹೊಳೆ ಮೀನು ಪ್ರಿಯರ ಸಮುದಾಯವೇ ಕರಾವಳಿಯಲ್ಲಿದೆ.

ದೋಣಿಗಳಲ್ಲಿ ದುಡಿಯುವವರಲ್ಲಿ ಬಹುಪಾಲು ಆಂಧ್ರ, ಒಡಿಶಾ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಮೀನುಗಾರಿಕೆ ನಿಷೇಧ ಇರುವುದರಿಂದ ಅವರೆಲ್ಲ ರಜೆಯಲ್ಲಿ ಊರಿಗೆ ತೆರಳಿದ್ದಾರೆ. ಆದರೆ ಮೀನುಗಾರಿಕೆ ಶುರುವಾಗುವ ದಿನ ಹತ್ತಿರ ಬರಲಾರಂಭಿಸಿರುವುದರಿಂದ ಅವರು ಮತ್ತೆ ಮಂಗಳೂರಿನತ್ತ ಮುಖ ಮಾಡಿದ್ದಾರೆ.

ಜು. 31ಕ್ಕೆ ಐಸ್ ಪ್ಲಾಂಟ್ ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಲಿದೆ. ಮೀನುಗಾರಿಕೆಗೆ ಬೋಟುಗಳನ್ನು, ಎಂಜಿನ್ ಗಳನ್ನು ದುರಸ್ತಿಗೊಳಿಸಿ ಹಾಗೂ ಬಲೆಗಳನ್ನು ಸಿದ್ಧಗೊಳಿಸುವ ಕಾರ್ಯ ನಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು