ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ನ 4 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ಸಂಜೆ ಸಿಆರ್ಪಿಎಫ್ ಯೋಧರ ಜತೆ ಪೊಲೀಸರು ಪಥಸಂಚಲನ ನಡೆಸಿದರು.
ಮಂಗಳಾದೇವಿ ದೇವಳದ ಬಳಿಯಿಂದ ಆರಂಭಗೊಂಡು ಕಾಸ್ಸಿಯಾ ಜಂಕ್ಷನ್, ಜೆಪ್ಪು ಮಾರ್ಕೆಟ್, ಬೋಳಾರ ಜಂಕ್ಷನ್, ಮಾರಿಗುಡಿ ತನಕ. ಕುತ್ತಾರ್ ರಾಜರಾಜೇಶ್ವರಿ ದೇವಳದ ಬಳಿಯಿಂದ ಆರಂಭಗೊಂಡು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ತನಕ, ಸುರತ್ಕಲ್ ಜಂಕ್ಷನ್ನಿಂದ ಆರಂಭಗೊಂಡು ಚೊಕ್ಕಬೆಟ್ಟು, ಜಂಕ್ಷನ್, ಜೋಕಟ್ಟೆ ಜಂಕ್ಷನ್ ತನಕ ಪಥಸಂಚಲನ ನಡೆಸಿ ಸಾರ್ವಜನಿಕರಲ್ಲಿ ಧೈರ್ಯ ತುಂಬಲಾಯಿತು.