ಕರಾವಳಿಯಲ್ಲಿ ತಾಪಮಾನದ ಏರಿಕೆಯಿಂದ ಪ್ರಾಣಿ ಪಕ್ಷಿ ಸಂಕುಲ ತತ್ತರಿಸಿವೆ. ಬಿಸಿಲಿನ ಬೇಗೆಯಿಂದ ರಕ್ಷಣೆ ಪಡೆಯಲು ನೀರಿನ ಮೊರೆ ಹೋಗುತ್ತಿವೆ. ಬಾಯಾರಿಕೆಯಿಂದ ಬಳಲಿದ ಕಾಳಿಂಗ ಸರ್ಪವೊಂದು ಪೈಪ್ ನೀರಿಗೆ ಹೆಡೆಯೆತ್ತಿ ನೀರು ಕುಡಿಯುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ.
ಬಿಸಿಲಿನ ಹೊಡೆತ ಜನರಿಗೆ ಮಾತ್ರವಲ್ಲ, ಪ್ರಾಣಿ ಪಕ್ಷಿಗಳು ದೊಡ್ಡಮಟ್ಟದಲ್ಲಿ ತಟ್ಟಿದೆ. ಹೀಗಾಗಿ ನೀರಿನ ಮೂಲಗಳನ್ನು ಹುಡುಕಿಕೊಂಡು ಹೋಗುವ ಮೂಲಕ ತಮ್ಮ ಬಾಯಾರಿಕೆಯ ದಾಹವನ್ನು ತೀರಿಸಿಕೊಳ್ಳುತ್ತಿವೆ.