ಕುಂದಾಪುರ: ಕರಾವಳಿ ತೀರ ಪ್ರದೇಶದಲ್ಲಿ ಕೆಲವು ದಿನಗಳಿಂದ ಗರಿಷ್ಠ ಪ್ರಮಾಣದಲ್ಲಿ ತಾಪಮಾನ ಏರಿಕೆಯಾಗಿದ್ದು ಬೀರು ಬಿಸಿಲಿನಲ್ಲಿ ಓಡಾಟ ಮಾಡುವುದು ಕಷ್ಟವಾಗಿದೆ ಬಿಸಿಲಿನ ತಾಪಕ್ಕೆ ಮೈಸುಡುತ್ತಿದೆ ದೇಹದ ದಾಹವನ್ನು ನೀಗಿಸಿಕೊಳ್ಳಲು ಜನರು ತಂಪು ಪಾನಿಗಳತ್ತಾ ಮೊರೆ ಹೊಗಿದ್ದಾರೆ.
ಹವಾಮಾನ ಇಲಾಖೆಯ ಮಾಹಿತಿ ಅಂತೆ ಕರಾವಳಿ ಜೆಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮಕ್ಕಳು ಮತ್ತು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.ಬಿಸಿಲಿನ ತಾಪ ಮತ್ತು ಬಿಸಿಲಿನಿಂದ ಉಂಟಾಗುವ ಉಷ್ಣಾಂಶವನ್ನು ರಕ್ಷಿಸಿಕೊಳ್ಳಲು ಶಾಲಾ ಅವಧಿಯಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವುವಂತೆ ಇಲಾಖೆ ಸೂಚಿಸಿದೆ.
1.ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ಯವರೆಗೆ ಬಿಸಿಲಿನಲ್ಲಿ ಆಟವಾಡದಿರುವುದು
2.ನೇರ ಬಿಸಿಲಿನಿಂದ ತಪ್ಪಿಸಿಕೊಳ್ಳುವುದು
3.ಅಗತ್ಯ ಸಂದರ್ಭದಲ್ಲಿ ಹೊರಗೆ ಹೋಗಲೆಬೇಕಾದಾಗ ಪಾದಾರಕ್ಷೆ ಕೊಡೆ,ಟೊಪ್ಪಿ ಬಳಸುವುದು
4.ಬಾಯಾರಿಕೆ ಇಲ್ಲದೆ ಇದ್ದರು ಆಗಾಗ ಸಾಕಷ್ಟು ನೀರನ್ನು ಕುಡಿಯುವುದು
5.ನಿಯಮಿತವಾಗಿ ಕೈತೊಳೆದು ಆಹಾರ ಸೇವಿಸುವುದು
6.ಅಡುಗೆ ತಯಾರಿ ಸಂದರ್ಭದಲ್ಲಿ ಕಿಟಕಿ ಬಾಗಿಲುಗಳನ್ನು ತೆರೆದಿಡುವುದು
7.ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು.
ಮಕ್ಕಳು ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈ ಮೇಲಿನ ಅಂಶಗಳ ಬಗ್ಗೆ ಮುಖ್ಯ ಶಿಕ್ಷಕರು,ಅಡುಗೆ ಸಿಬ್ಬಂದಿಗಳು ಹಾಗೂ ಪೋಷಕರು ಕ್ರಮವಹಿಸಿವಂತೆ ಮಾಹಿತಿ ನೀಡಲು ಹಾಗೂ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರನ್ನು ವ್ಯವಸ್ಥೆ ಒದಗಿಸಲು ತಮ್ಮ ವಲಯದ ಮುಖ್ಯ ಶಿಕ್ಷಕರಿಗೆ ತಿಳಿಸುವಂತೆ,ಕಛೇರಿಗೆ ವರದಿಯನ್ನು ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.