ಕಾಸರಗೋಡು: ರಸ್ತೆ ಬದಿ ಯುವಕನೋರ್ವ ಬೆಂಕಿ ಹಚ್ಚಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ಬೋವಿಕ್ಕಾನ ಬಳಿ ಗುರುವಾರ ರಾತ್ರಿ ನಡೆದಿದೆ.
ಶಂಕ್ರಪಾಡಿ ಪಡುಪ್ಪು ಕುಳಿಯಂಕಲ್ ನ ಇ.ಎಂ ಸದ್ಗೀತಿ ( ೩೧) ಮೃತಪಟ್ಟವರು. ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸದ್ಗೀತಿ ಹಲವು ವರ್ಷಗಳ ಕಾಲ ವಿದೇಶದಲ್ಲಿದ್ದರು. ಬಳಿಕ ಊರಿಗೆ ಬಂದು ನೆಲೆಸಿದ್ದರು.
ಅವಿವಾಹಿತರಾಗಿದ್ದ ಇವರು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದರು. ಆದರೆ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ . ಆದೂರು ಪೊಲೀಸರು ಮಹಜರು ನಡೆಸಿದರು.