News Karnataka Kannada
Tuesday, May 07 2024
ಕಾಸರಗೋಡು

ಸ್ಕೂಟರ್ ಮನೆಯ ಆವರಣ ಗೋಡೆಗೆ ಬಡಿದು ಸವಾರ ಸಾವು

ಪ್ರೀತಿಸಿದವರೊಂದಿಗೆ ವಿವಾಹವಾಗದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ನಡೆದಿದೆ.
Photo Credit :

ಕಾಸರಗೋಡು: ಸ್ಕೂಟರ್ ಮನೆಯ ಆವರಣ ಗೋಡೆಗೆ ಬಡಿದು ಸವಾರ ಮೃತಪಟ್ಟ ಘಟನೆ ಗುರುವಾರ   ಬಂಗ್ರಮಂಜೇಶ್ವರ ಬಳಿ  ನಡೆದಿದೆ.

ಹೊಸಂಗಡಿ ರೈಲ್ವೆ ಗೇಟ್  ಸಮೀಪದ  ದೀಕ್ಷಿತ್ ( 30) ಮೃತಪಟ್ಟವರು. ಬಂಗ್ರ ಮಂಜೇಶ್ವರ ಕಟ್ಟೆ ಬಜಾರ್ ನಲ್ಲಿ ಅಪಘಾತ ನಡೆದಿದೆ. ಬೆಳಿಗ್ಗೆ  ಈ ದಾರಿಯಾಗಿ ತೆರಳುತ್ತಿದ್ದ ಮೀನುಗಾರರ   ಗಮನಕ್ಕೆ ಬಂದಿದ್ದು, ಸ್ಕೂಟರ್ ಅಪಘಾತ ಕ್ಕೀಡಾಗಿರುವು ಕಂಡು ಬಂದಿದೆ. ಬಳಿಕ ಗಮನಿಸಿದಾಗ ದೀಕ್ಷಿತ್  ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ.

ಕೂಡಲೇ ಮಂಜೇಶ್ವರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹದ  ಮಹಜರು ನಡೆಸಿ  ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು  ಮಂಗಲ್ಪಾಡಿಯಲ್ಲಿರುವ  ತಾಲೂಕು ಆಸ್ಪತ್ರೆಗೆ ಸಾಗಿಸಿದರು.

ದೀಕ್ಷಿತ್ ಮಂಗಳೂರಿನಲ್ಲಿ ಚಾಲಕರಾಗಿ ದುಡಿಯುತ್ತಿದ್ದು , ಬುಧವಾರ ರಾತ್ರಿ ಮರಳುತ್ತಿದ್ದಾಗ ಅಪಘಾತ ನಡೆದಿರಬಹುದು ಎಂದು ಶಂಕಿಸಲಾಗಿದ. ದೀಕ್ಷಿತ್ ತಂದೆ  ದಿನೇಶ್ ಕುಮಾರ್   ಹೊಸಂಗಡಿಯಲ್ಲಿ ಟ್ಯಾಕ್ಸಿ ಚಾಲಕರಾಗಿದ್ದಾರೆ. ಮಂಜೇಶ್ವರ ಠಾಣಾ ಪೊಲೀಸರು  ದಾಖಲಿಸಿಕೊಂಡಿದ್ದಾರೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು