ಕಾಸರಗೋಡು: ಸ್ಕೂಟರ್ ಮನೆಯ ಆವರಣ ಗೋಡೆಗೆ ಬಡಿದು ಸವಾರ ಮೃತಪಟ್ಟ ಘಟನೆ ಗುರುವಾರ ಬಂಗ್ರಮಂಜೇಶ್ವರ ಬಳಿ ನಡೆದಿದೆ.
ಹೊಸಂಗಡಿ ರೈಲ್ವೆ ಗೇಟ್ ಸಮೀಪದ ದೀಕ್ಷಿತ್ ( 30) ಮೃತಪಟ್ಟವರು. ಬಂಗ್ರ ಮಂಜೇಶ್ವರ ಕಟ್ಟೆ ಬಜಾರ್ ನಲ್ಲಿ ಅಪಘಾತ ನಡೆದಿದೆ. ಬೆಳಿಗ್ಗೆ ಈ ದಾರಿಯಾಗಿ ತೆರಳುತ್ತಿದ್ದ ಮೀನುಗಾರರ ಗಮನಕ್ಕೆ ಬಂದಿದ್ದು, ಸ್ಕೂಟರ್ ಅಪಘಾತ ಕ್ಕೀಡಾಗಿರುವು ಕಂಡು ಬಂದಿದೆ. ಬಳಿಕ ಗಮನಿಸಿದಾಗ ದೀಕ್ಷಿತ್ ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಕೂಡಲೇ ಮಂಜೇಶ್ವರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹದ ಮಹಜರು ನಡೆಸಿ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಲ್ಪಾಡಿಯಲ್ಲಿರುವ ತಾಲೂಕು ಆಸ್ಪತ್ರೆಗೆ ಸಾಗಿಸಿದರು.
ದೀಕ್ಷಿತ್ ಮಂಗಳೂರಿನಲ್ಲಿ ಚಾಲಕರಾಗಿ ದುಡಿಯುತ್ತಿದ್ದು , ಬುಧವಾರ ರಾತ್ರಿ ಮರಳುತ್ತಿದ್ದಾಗ ಅಪಘಾತ ನಡೆದಿರಬಹುದು ಎಂದು ಶಂಕಿಸಲಾಗಿದ. ದೀಕ್ಷಿತ್ ತಂದೆ ದಿನೇಶ್ ಕುಮಾರ್ ಹೊಸಂಗಡಿಯಲ್ಲಿ ಟ್ಯಾಕ್ಸಿ ಚಾಲಕರಾಗಿದ್ದಾರೆ. ಮಂಜೇಶ್ವರ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದಾರೆ .