ಯಾದಗಿರಿ: ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಗು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.
ಗುರುವಾರ ತಡರಾತ್ರಿ ಗುರ್ಮಿಟ್ಕಲ್ ಪಟ್ಟಣದ ಬಳಿ ಅಪಘಾತ ಸಂಭವಿಸಿದೆ.
ಮೃತರನ್ನು ಮೊಹಮ್ಮದ್ ಮಜರ್ ಹುಸೇನ್ (79), ನೂರ್ ಜಹಾನ್ ಬೇಗಂ (70), ಮೊಹಮ್ಮದ್ ವಾಜಿದ್ ಹುಸೇನ್ (39), ಹೀನಾ ಬೇಗಂ (30), ಇಮ್ರಾನ್ (22) ಮತ್ತು ಉಮೇಜಾ (ಆರು ತಿಂಗಳು) ಎಂದು ಗುರುತಿಸಲಾಗಿದೆ.
ಕಾರಿನ ಚಾಲಕ ಮೊಹಮ್ಮದ್ ಫಾಜಿಲ್ ಹುಸೇನ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬಳಿಯ ಹಟ್ಟಿ ಗ್ರಾಮದ ಕುಟುಂಬ.
ತೆಲಂಗಾಣದ ಕೊಡಂಗಲ್ ಬಳಿಯ ದರ್ಗಾವೊಂದಕ್ಕೆ ಹೋಗಿದ್ದರು. ಕುಟುಂಬ ಸಮೇತರಾಗಿ ಮನೆಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ.