ಕಾಸರಗೋಡು: ಪತ್ನಿಯು ಪತಿಯನ್ನು ಕೊಲೆಗೈದ ದಾರುಣ ಘಟನೆ ಪಾಣತ್ತೂರಿನಲ್ಲಿ ಸಂಜೆ ನಡೆದಿದೆ. ಪುತ್ತೂರಡ್ಕದ ಬಾಬು (54) ಮೃತ ಪಟ್ಟವರು.ಕೃತ್ಯಕ್ಕೆ ಸಂಬಂಧ ಪಟ್ಟಂತೆ ಪತ್ನಿ ಸೀಮಂತಿನಿನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.
ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ದಿನಂಪ್ರತಿ ಪಾನಮತ್ತರಾಗಿ ಮನೆಗೆ ಬರುತ್ತಿದ್ದ ಬಾಬು ಶುಕ್ರವಾರ ಸಂಜೆಯೂ ಮನೆಗೆ ಬಂದ ಬಳಿಕ ಇಬ್ಬರ ಜಗಳವಾಗಿದ್ದು, ಈ ಸಂದರ್ಭದಲ್ಲಿ ಕತ್ತಿಯಿಂದ ಬಾಬು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಇದೇ ಕತ್ತಿಯಿಂದ ಬಾಬುವನ್ನು ಕಡಿದು ಕೊಲೆ ಗೈದಿದ್ದಾಳೆ.
ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಬಾಬು ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದ್ದಾರೆ.ಕೂಡಲೇ ರಾಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳ ಕ್ಕಾಗಾಮಿಸಿದ ಪೊಲೀಸರು ಪತ್ನಿ ಸೀಮಂತಿನಿಯನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ಗಾಯ ಗೊಂಡಿರುವ ಸೀಮಂತಿನಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹದ ಮಹಜರು ನಡೆಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.