ಕಾಸರಗೋಡು: ಪೆರ್ಲ ಏಳ್ಕಾನ ಶೇಣಿ ಮೈರೆಯ ರಬ್ಬರ್ ಎಸ್ಟೇಟ್ ನ ಮನೆಯಲ್ಲಿ ಮಹಿಳೆಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಹಿಳೆಯ ಪತಿಯನ್ನು ಬದಿಯಡ್ಕ ಪೊಲೀಸರು ತಿರುವನಂತಪುರದಿಂದ ವಶಕ್ಕೆ ತೆಗೆದುಕೊಂಡಿದ್ದಾರೆ.
ಪುಲ್ಪಳ್ಳಿಯ ಆಂಟೋ ಸೆಬಾಸ್ಟಿಯನ್ (32) ಬಂಧಿತ ಆರೋಪಿ.
ಕೊಲೆ ಬಳಿಕ ಈತ ತಲೆ ಮರೆಸಿ ಕೊಂಡಿದ್ದನು. ರಬ್ಬರ್ ಟ್ಯಾಪಿಂಗ್ ಕಾರ್ಮಿಕೆಯಾಗಿದ್ದ ಕೊಲ್ಲಂ ಮೂಲದ ನೀತು ಕೃಷ್ಣ (26) ಕೊಲೆಗೀಡಾದ ಸ್ಥಿತಿಯಲ್ಲಿ ಎರಡು ದಿನಗಳ ಹಿಂದೆ ಪತ್ತೆಯಾಗಿದ್ದರು. ಈ. ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ಆರೋಪಿಯನ್ನು ಇಂದು ಸಂಜೆ ಕಾಸರಗೋಡಿಗೆ ಕರೆ ತರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.