ಕಾಸರಗೋಡು: ಬಸ್ ಪ್ರಯಾಣಿಕನೋರ್ವನಿಂದ ಸುಮಾರು ೨೦.೫ ಲಕ್ಷ ರೂ.ಹವಾಲ ಹಣವನ್ನು ಮಂಜೇಶ್ವರ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮಹಾರಾಷ್ಟ್ರ ನಿವಾಸಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನ ಮಹಾರಾಷ್ಟ್ರದ ಪಿ ಸಂತೋಷ್ ಎಂದು ಗುರುತಿಸಲಾಗಿದೆ.
ಬುಧವಾರ ಬೆಳಿಗ್ಗೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಹಣ ಪತ್ತೆಯಾಗಿದೆ. ಸೀಟಿನಡಿವಲ್ಲಿ ಬಚ್ಚಿಟ್ಟು ಹಣವನ್ನು ತರಲಾಗುತ್ತಿತ್ತು. ಹಣವನ್ನು ತೃಶ್ಯೂರಿಗೆ ಸ್ಥಳ ಖರೀದಿಸಲು ಕೊಂಡೊಯ್ಯುತ್ತಿರುವುದಾಗಿ ಹೇಳಿಕೆ ನೀಡಿದ್ದು,ಬಂಧಿತನನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾ೦ತರಿಸಲಾಗಿದೆ.