ಕಾಸರಗೋಡು : ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ತಿದ್ದುಪಡಿ ತಂದು ವನ್ಯ ಮೃಗ ಹಾವಳಿ ತಡೆಗಟ್ಟಬೇಕು, ಕೃಷಿ ಹಾನಿಗೊಂಡವರಿಗೆ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೃಷಿಕ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಅರಣ್ಯ ಇಲಾಖಾ ಕಚೇರಿಗೆ ಪ್ರತಿಭಟನಾ ಜಾಥಾ ನಡೆಸಲಾಯಿತು.
ವನ್ಯ ಜೀವಿಗಳ ಹಾವಳಿ ತಡೆಗಟ್ಟಬೇಕು , ಅರ್ಹರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಜಾಥಾ ನಡೆಸಲಾಯಿತು. ಕೃಷಿಕ ಸಂಘ ಜಿಲ್ಲಾ ಕಾರ್ಯದರ್ಶಿ ಪಿ . ಜನಾರ್ಧನ ಪ್ರತಿಭಟನೆಯನ್ನು ಉದ್ಘಾಟಿಸಿದರು. ಮಾಜಿ ಶಾಸಕ ಕೆ . ಕುಂಞರಾಮನ್ ಅಧ್ಯಕ್ಷತೆ ವಹಿಸಿದ್ದರು. ಎ . ರವೀಂದ್ರನ್ , ಪಿ . ರಘುದೇವನ್ , ವಿಜಯಕುಮಾತ್ , ಕೆ . ಅಬು , ಟಿ . ಕೋರನ್ ಮೊದಲಾದವರು ಮಾತನಾಡಿದರು.