News Karnataka Kannada
Sunday, May 05 2024
ಕಾಸರಗೋಡು

ಕಾಸರಗೋಡು: ಎಂ.ಪ್ರಿಯೇಶ್ ರನ್ನು ಕೊಲೆ ಗೈದ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯ ಬಂಧನ

M Priyesh
Photo Credit : By Author

ಕಾಸರಗೋಡು: ತೃಕ್ಕರಿಪುರ ಮಟ್ಟಮ್ಮಲ್ ನ ಎಂ.ಪ್ರಿಯೇಶ್ ( ೩೨) ರನ್ನು ಕೊಲೆ ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತೃಕ್ಕರಿಪುರ ಪೊರಪ್ಪಾಡ್ ನ ಸಫ್ವಾನ್ ( ೨೫) ಬಂಧಿತ ಆರೋಪಿ. ವಿದೇಶಕ್ಕೆ ಪರಾರಿಯಾಗಲು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತಲಪಿದ ಈತನನ್ನು ಬಂಧಿಸಲಾಗಿದೆ.

ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದ ಸಫ್ವಾನ್ ಇತ್ತೀಚಿಗೆ ಊರಿಗೆ ಬಂದಿದ್ದನು. ಡಿ.೪ ರಂದು ರಾತ್ರಿ ಪ್ರಿಜೇಶ್ ರನ್ನು ಕೊಲೆ ಮಾಡಿತ್ತು. ಮೊಬೈಲ್ ಗೆ ಬಂದಿದ್ದ ಕರೆಯ ಹಿನ್ನಲೆಯಲ್ಲಿ ಬೈಕ್ ನಲ್ಲಿ ತೆರಳಿದ್ದ ಪ್ರೀಜೇಶ್ ಮರಳಿ ಬಂದಿರಲಿಲ್ಲ. ಮರುದಿನ ಬೆಳಿಗ್ಗೆ ಮನೆಯ ಅಲ್ಪ ದೂರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಮೀಪ ಅವರ ಬೈಕ್ ಪತ್ತೆಯಾಗಿತ್ತು.

ತಂಡವು ಥಳಿಸಿ ಕೊಲೆ ಮಾಡಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಹಮ್ಮದ್ ಶಬಾಸ್ ಮತ್ತು ಮುಹಮ್ಮದ್ ರಹನಾಸ್ ನನ್ನು ಈ ಹಿಂದೆ ಬಂಧಿಸಲಾಗಿತ್ತು. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು