News Karnataka Kannada
Friday, May 03 2024
ಕಾಸರಗೋಡು

ಕಾಸರಗೋಡು: ರಸ್ತೆ ಬದಿ ನಿಲುಗಡೆಗೊಳಿಸಿದ್ದ ಲಾರಿಯ ಹಿಂಬದಿಗೆ  ಕಾರು ಡಿಕ್ಕಿ, ಓರ್ವ ಸಾವು

One killed as car collides with the rear of a lorry parked on the roadside
Photo Credit : By Author
ಕಾಸರಗೋಡು: ರಸ್ತೆ ಬದಿ ನಿಲುಗಡೆಗೊಳಿಸಿದ್ದ ಲಾರಿಯ ಹಿಂಬದಿಗೆ  ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಮೂವರು ಗಾಯಗೊಂಡ  ಘಟನೆ ಕಾಸರಗೋಡು ನಗರದಲ್ಲಿ  ಇಂದು ಮುಂಜಾನೆ ನಡೆದಿದೆ.
ಚೆಂಗಳದ ಸಂಶುದ್ದೀನ್ ರವರ ಪುತ್ರ  ಮುಹಮ್ಮದ್ ಸಾಹಿಲ್ (21) ಮೃತ ಪಟ್ಟವರು. ನಗರದ ಹಳೆ ಬಸ್ಸು  ನಿಲ್ದಾಣ ಪರಿಸರದಲ್ಲಿ ಈ ಅಪಘಾತ ನಡೆದಿದೆ ಅಣಂಗೂರು ಕಡೆಯಿಂದ ಮೂವರು ಸ್ನೇಹಿತರ ಜೊತೆ ಬರುತ್ತಿದ್ದಾಗ  ನಿಲುಗಡೆ ಗೊಳಿಸಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ.
ಸಾಹಿಲ್ ಸ್ಥಳದಲ್ಲೇ ಮೃತ ಪಟ್ಟರೆ ಗಂಭೀರ ಗಾಯ ಗೊಂಡ ಮೂವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ . ಕಾರು ನಜ್ಜು ಗುಜ್ಜಾಗಿದೆ.
ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರ ದ ಲ್ಲಿರಿಸಲಾಗಿದ್ದು,  ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ.
ಕಾಸರಗೋಡು ನಗರ   ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು