ಕಾಸರಗೋಡು: ಕಣ್ಣೂರು ಜಿಲ್ಲೆಯ ಕೇಳಗಂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಬುಡಕಟ್ಟು ಜನಾಂಗದವರು ವಾಸವಾಗಿರುವ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆಯ ಸಮವಸ್ತ್ರ ಹೋಲುವ ವಸ್ತ್ರ ಧರಿಸಿದ ಶಂಕಿತ ನಕ್ಸಲರ ತಂಡ ಕಂಡುಬಂದಿದೆ.
ಕನ್ನಡ ಮತ್ತು ತಮಿಳು ಮಿಶ್ರಿತ ಮಲೆಯಾಳ ಭಾಷೆಯಲ್ಲಿ ಮಾತನಾಡುವ ಅವರು ಈ ಪ್ರದೇಶದ ಮನೆ ಮಾಲೀಕನ ಬಳಿ ಬಂದು ನಿಮ್ಮ ಮನೆಯಲ್ಲಿ ನಮಗೆ ಏನಾದರೂ ಆಹಾರ ಸಿಗಬಹುದೇ ಎಂದು ಪ್ರಶ್ನಿಸಿದ್ದಾರೆ. ಆದರೆ ಆ ವ್ಯಕ್ತಿ ತನ್ನ ಮನೆ ಆ ಪ್ರದೇಶದಿಂದ ತುಂಬಾ ದೂರವಿರುವುದಾಗಿ ಹೇಳಿದಾಗ ಅಪರಿಚಿತರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ಒದಗಿಸಿದ್ದು ನಂತರ ಥಂಡರ್ ಬೋಲ್ಟ್ ಪಡೆ ಆ ಪ್ರದೇಶದಲ್ಲಿ ಜಾಲಾಡಿದರೂ ಪ್ರಯೋಜನವಾಗಿಲ್ಲ.