ಕಾಸರಗೋಡು: ಜ್ಯೂಸ್ ನಲ್ಲಿ ನಿಷೇಧಿತ ಪಾನ್ ಮಸಾಲ ಉತ್ಪನ್ನ ಬೆರೆಸಿ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲಕನನ್ನು ಹೊಸದುರ್ಗ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗ ಮೀನಾಫೀಸ್ ಕಡಪ್ಪುರದ ಅಬ್ದುಲ್ ಸತ್ತಾರ್ (48) ಬಂಧಿತ ಆರೋಪಿ. ಜ್ಯೂಸ್ ನ ರುಚಿ ಹೆಚ್ಚಿಸಲು ಹಾಗೂ ಗ್ರಾಹಕರನ್ನು ಆಕರ್ಷಿಸಲು ಪಾನ್ ಮಸಾಲ ಹುಡಿಯನ್ನು ಜ್ಯೂಸ್ ಗೆ ಬೆರೆಸು ತ್ತದ್ದನು.
ಈ ಜ್ಯೂಸ್ ಅಂಗಡಿಗೆ ದೂರ ದೂರಿನಿಂದ ವಿದ್ಯಾರ್ಥಿ ಗಳು ಸೇರಿದಂತೆ ಹಲವಾರು ಮಂದಿ ಬರುತ್ತಿದ್ದು, ಈ ಬಗ್ಗೆ ಪರಿಸರ ವಾಸಿಗಳು ನೀಡಿದ ಮಾಹಿತಿಯಂತೆ ಪೊಲೀಸರು ನಿಗಾ ಇರಿಸಿದ್ದರು. ಇದರಂತೆ ನಿನ್ನೆ ರಾತ್ರಿ ಡಿವೈಎಸ್ಪಿಪಿ. ಪಿ ಬಾಲಕೃಷ್ಣನ್ ನೇತೃತ್ವದ ಪೊಲೀಸ್ ತಂಡ ತಪಾಸಣೆ ನಡೆಸಿದ್ದು, ಅಂಗಡಿ ಯಿಂದ ನಿಷೇಧಿತ ಪಾನ್ ಉತ್ಪನ್ನ ವಾದ ‘ ಕೂಲ್’ ನ್ನು ವಶಪಡಿಸಿಕೊಂಡಿದೆ.
ಅಂಗಡಿಯ ಲೈಸೆನ್ಸ್ ನ್ನು ರದ್ದು ಪಡಿಸಲು ನಗರ ಸಭೆಗೆ ಮನವಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.