ಕಾಸರಗೋಡು: ಕುಂಬಳೆ ಜನಮೈತ್ರಿ ಪೊಲೀಸ್, ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ವಲಸೆ ಕಾರ್ಮಿಕರಿಗೆ ಅರೋಗ್ಯ ತಪಾಸಣೆ ಶಿಬಿರ ಕುಂಬಳೆಯಲ್ಲಿ ಬುಧವಾರ ನಡೆಯಿತು.
ಹೋಟೆಲ್, ಬೇಕರಿ, ಕೂಲ್ ಡ್ರಿಂಕ್ಸ್ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ವಲಸೆ ಕಾರ್ಮಿಕರಿಗಾಗಿ ಶಿಬಿರ ನಡೆಸಲಾಯಿತು.ಕುಂಬಳೆ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಪಿ.ಪ್ರಮೋದ್ ಉದ್ಘಾಟಿಸಿದರು. ಮಲೇರಿಯಾ,ಟೈಫಾಯ್ಡ್, ಹಳದಿ ಜ್ವರ ಸೇರಿದಂತೆ ಆರು ರೋಗಗಳ ಲ್ಯಾಬ್ ತಪಾಸಣಾ ನಡೆಸಲಾಯಿತು.
ಡಾ.ದೀಪ್ತಿ ವಿಜಯಕುಮಾರ್ ರವರು ತಪಾಸಣೆಗೆ ನೇತೃತ್ವ ನೀಡಿದರು.ರೋಗ ಪತ್ತೆಯಾದವವರಿಗೆ ಆರೋಗ್ಯ ಕಾರ್ಡ್ ನೀಡಲು ತೀರ್ಮಾನಿಸಲಾಯಿತು.ಆರೋಗ್ಯಾಧಿಕಾರಿ ಡಾ.ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು.
ಅರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಸುರೇಶ್ ಕುಮಾರ್, ಅರೋಗ್ಯ ಅಧಿಕಾರಿ ನಿಶಾ ಮೋಳ್,ಎಂ. ಗೋವಿಂದನ್, ಶ್ರೀಕುಮಾರ್, ಸಿ ಸಿ.ಬಾಲಚಂದ್ರನ್, ಅಖಿಲ್ ಕಾರಾಯಿ, ಎಸ್.ಶಾರದಾ ಮಾತನಾಡಿದರು.