News Karnataka Kannada
Saturday, April 27 2024
ಕಾಸರಗೋಡು

ಕಾಸರಗೋಡು: ಲಂಚ ಪ್ರಕರಣ, ನ್ಯಾಯಾಲಯಕ್ಕೆ ಆರೋಪ  ಪಟ್ಟಿ ಸಲ್ಲಿಸಿದ ಕ್ರೈಂ ಬ್ರಾಂಚ್

Relatives of politicians at strategic locations, talk of eradicating corruption elsewhere
Photo Credit : Pixabay

ಕಾಸರಗೋಡು: ಮಂಜೇಶ್ವರ  ವಿಧಾನಸಭಾ ಚುನಾವಣೆಯಲ್ಲಿ  ಲಂಚ ಪ್ರಕರಣಕ್ಕೆ  ಸಂಬಂಧಪಟ್ಟಂತೆ  ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್  ಕಾಸರಗೋಡು ಜಿಲ್ಲಾ  ನ್ಯಾಯಾಲಯದಲ್ಲಿ ಆರೋಪ  ಪಟ್ಟಿ ಸಲ್ಲಿಸಿದೆ.

ಬಿಜೆಪಿ ರಾಜ್ಯಅಧ್ಯಕ್ಷ  ಕೆ . ಸುರೇಂದ್ರನ್  ಪ್ರಥಮ ಆರೋಪಿಯಾಗಿರುವ  ಈ ಪ್ರಕರಣದಲ್ಲಿ ಒಟ್ಟು ಆರು ಮಂದಿ ಒಳಗೊಂಡಿದ್ದಾರೆ.  ಬಿಜೆಪಿ ಜಿಲ್ಲಾ ಮಾಜಿ  ಅಧ್ಯಕ್ಷ  ಬಾಲಕೃಷ್ಣ ಶೆಟ್ಟಿ,  ಯುವ ಮೋರ್ಚಾ ಮುಖಂಡ ಸುನಿಲ್  ನಾಯ್ಕ್ ,  ವೈ .ಸುರೇಶ್, ಮಣಿಕಂಠ ರೈ, ಲೋಕೇಶ್ ನೋಂಡ  ಉಳಿದ ಆರೋಪಿಗಳೆಂದು ಕ್ರೈಂ ಬ್ರಾಂಚ್ ಗುರುತಿಸಿದೆ.

೨೦೨೧ ರಲ್ಲಿ ನಡೆದ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ   ಮಂಜೇಶ್ವರದಿಂದ ಬಿ ಎಸ್ಪಿ ಅಭ್ಯರ್ಥಿಯಾಗಿ  ನಾಮಪತ್ರ ಸಲ್ಲಿಸಿದ್ದ  ಕೆ. ಸುಂದರ ರವರನ್ನು ನಾಮಪತ್ರ ಹಿಂದಕ್ಕೆ ಪಡೆಯಲು ಬಿಜೆಪಿ ಅಭ್ಯರ್ಥಿಯಾಗಿದ್ದ  ಕೆ ಸುರೇಂದ್ರನ್  ಎರಡೂ ವರೆ ಲಕ್ಷ ರೂ . ನಗದು ಹಾಗೂ ಮೊಬೈಲ್ ಫೋನ್ ನೀಡಿದ್ದು , ಮಾತ್ರವಲ್ಲ  ಇತರ  ಆಮಿಷಗಳನ್ನು ನೀಡಲಾಗಿತ್ತು. ಈ  ಬಗ್ಗೆ ಚುನಾವಣೆ ಬಳಿಕ ಕೆ. ಸುಂದರವರೆ   ಬಹಿರಂಗಪಡಿಸಿದ್ದರು.

ಇದರಂತೆ ಎಲ್ ಡಿ ಎಫ್ ಅಭ್ಯರ್ಥಿಯಾಗಿದ್ದ ವಿ . ವಿ ರಮೇಶನ್ ನೀಡಿದ್ದ ದೂರಿನಂತೆ ೨೦೨೧ ರ ಜೂನ್ ನಲ್ಲಿ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ನ್ಯಾಯಾಲಯದ ಆದೇಶದಂತೆ  ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿತ್ತು,  ಸುರೇಂದ್ರನ್ ವಿರುದ್ಧ ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ  ತಡೆ  ಮೊಕದ್ದಮೆ , ಅನುಮತಿ ಇಲ್ಲದೆ ಮನೆಗೆ ಅತಿಕ್ರಮ ದೂರುಗಳನ್ನು ದಾಖಲಿಸಲಾಗಿದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು