ಕಾಸರಗೋಡು: ಕೃಷಿ ಇಲಾಖೆಯು ಜಮೀನುಗಳಲ್ಲಿ ಡ್ರೋನ್ ಬಳಸಿ ಔಷಧಿ ಸಿಂಪಡನೆಗೆ ತರಬೇತಿ ಕೃಷಿ ಇಲಾಖೆ ತರಬೇತಿಗೆ ಮುಂದಾಗಿದೆ. ಕೃಷಿ ಯಾಂತ್ರೀಕರಣದ ಅಂಗವಾಗಿ ಜಿಲ್ಲೆಯಲ್ಲಿ ಕೃಷಿ ಡ್ರೋನ್ಗಳ ಪ್ರದರ್ಶನ ಮತ್ತು ತರಬೇತಿಯನ್ನು ಆಯೋಜಿಸಲಾಗಿದೆ, ಇದು ಕೃಷಿ ಇಲಾಖೆಯಡಿಯಲ್ಲಿ ಕೇಂದ್ರೀಯವಾಗಿ ಪ್ರಾರಂಭಿಸಿದ ಯೋಜನೆಯಾಗಿದೆ.
ಭತ್ತದ ಗದ್ದೆಗ ಳಲ್ಲಿ ಭತ್ತದ ಸಸಿಗಳಿಗೆ ರೋಗಗಳಿದ್ದಲ್ಲಿ ಅದನ್ನು ಸುಲಭವಾಗಿ ಪತ್ತೆ ಹಚ್ಚಿ ಡ್ರೋನ್ ಬಳಸಿ ಅಗತ್ಯ ಔಷಧಗಳನ್ನು ಸಿಂಪಡಿಸಬಹುದಾಗಿದೆ.
ಒಂದು ಎಕರೆ ಬಯಲು ಗದ್ದೆಗೆ ಎಂಟು ನಿಮಿಷದಲ್ಲಿ ಔಷಧಿ ಸಿಂಪಡಿಸಬಹುದು. ಕೃಷಿ ವಲಯದಲ್ಲಿ ಸಿಂಪಡಣೆಗೆ ಕೂಲಿಕಾರರು ಸಿಗದೇ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಯಾಂತ್ರೀಕೃತ ಸಿಂಪಡಣೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಕೃಷಿ ಇಲಾಖೆ ಯ ಅಭಿಪ್ರಾಯ.
ಪುಲ್ಲೂರು ಸೀಡ್ ಫಾರ್ಮ್ ಕಾಞಂಗಾಡ್ ನಲ್ಲಿ ನಡೆದ ಕೃಷಿ ಡ್ರೋನ್ ಪ್ರದರ್ಶನ ಮತ್ತು ತರಬೇತಿಯನ್ನು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಉದ್ಘಾಟಿಸಿದರು.
ಪಂಚಾಯತ್ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮಾಜಿ ಎಂಜಿನಿಯರ್ ಸಿ.ಕೆ.ಮೋಹನನ್ ವರದಿ ಮಂಡಿಸಿದರು. ಪಂಚಾಯತ್ ಸದಸ್ಯರಾದ ಎಂ.ವಿ.ನಾರಾಯಣನ್, ಟಿ.ವಿ.ಕರಿಯನ್, ಬಂಗಳಂ ಕುಂಞಿಕೃಷ್ಣನ್ ಮಾತನಾಡಿದರು. ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ಸ್ವಾಗತಿಸಿ, ಕೃಷಿ ಸಹಾಯಕ ಕಾರ್ಯಪಾಲಕ ಅಭಿಯಂತರ ಎ.ಭಾಸ್ಕರನ್