ಬೆಂಗಳೂರು: ಸ್ವರ ಮಾಂತ್ರಿಕ, ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಇವರ ಹೆಸರು ಕೇಳುತ್ತಲೇ ನೆನೆಪಿಗೆ ಬರುವುದು ಇವರ ಅದ್ಭುತವಾದ ಕಂಠಸಿರಿ. ಇವರ ಹಾಡುಗಳು ಕೇವಲ ಕಿವಿಗಷ್ಟೇ ತಂಪಲ್ಲ, ಮನಸ್ಸಿಗೂ ಅಷ್ಟೇ ಮುದ ನೀಡುವಂತದ್ದು. ತಮ್ಮ ಕಂಠ ಸಿರಿಯಿಂದಲೇ ಎಲ್ಲರ ಮನಸ್ಸು ಸೆಳೆದವರು, ಹಾಗೇ ನಟಿ ಸೌಂದರ್ಯ ಹೆಸರಿಗೆ ತಕ್ಕ ಹಾಗೇ ಸೌಂದರ್ಯವತಿಯೂ ಹೌದು. ಜೊತೆಗೆ ಪಾತ್ರವೇ ತಾನಾಗಿ ನಟಿಸುವ ಅದ್ಭುತವಾದ ನಟಿ ಇವರು. ತಮ್ಮ ನಟನೆಯಿಂದ ಇಂದಿಗೂ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡವರು. ಈ ಇಬ್ಬರೂ ಸಾಧಕರಿಗೆ ‘ಗಾನ ನಮನ’ ಸಲ್ಲಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಮರ ಸೌಂದರ್ಯ ಫೌಂಡೇಷನ್ ರವರಿಂದ – ವಿಶೇಷ ಚೇತನ ಮಕ್ಕಳಿಗಾಗಿ , ರೋಟರಿ ಬೆಂಗಳೂರು – ರಾಜ್ ಮಹಲ್ ವಿಲಾಸ್ ಸಹಯೋಗದೊಂದಿಗೆ “ತಾಳಮೇಳ” ಸಂಗೀತ ಸಂಜೆ ಯನ್ನು ಆಯೋಜಿಸಲಾಗಿದೆ . ಎಸ್.ಪಿ.ಶೈಲಜಾ, ಎಸ್.ಪಿ.ಚರಣ್ ಹಾಗೂ ತಂಡದವರು ಗಾನ ನಮನ ಸಲ್ಲಿಸಲಿದ್ದಾರೆ. ಇದೆ ಜನವರಿ 29 ಭಾನುವಾರ ರಂದು ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.