ಕಾಸರಗೋಡು : ಉದ್ಯೋಗದ ಭರವಸೆ ನೀಡಿ ಪೆರ್ಲ ನಿವಾಸಿ ಸೇರಿದಂತೆ ನಾಲ್ವರಿಂದ ಲಕ್ಷಾಂತರ ರೂ.ಪಡೆದು ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರು ನಿವಾಸಿಯೋರ್ವ ನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ ಬಂಧಿತನನ್ನು ಮೈಸೂರು ಜಯನಗರ ವಿದ್ಯಾರಣ್ಯಪುರದ ಆರ್.ವಿ ಹಿರೇಮಠ್ (48) ಎಂದು ಗುರುತಿಸಲಾಗಿದೆ.
ಪೆರ್ಲ ಕಾಟುಕುಕ್ಕೆಯ ಗೀತೇಶ್ ರವರ ದೂರಿನಂತೆ ಈತನನ್ನು ಬಂಧಿಸಲಾಗಿದೆ.ಮೈಸೂರು ಸಿಲ್ಕ್ ನ ಲ್ಲಿ ಅಟೆಂಡರ್ ಉದ್ಯೋಗ ನೀಡುವ ಭರವಸೆ ನೀಡಿ ಮೂರು ಲಕ್ಷ ರೂ. ಪಡೆದು ವಂಚಿಸಿದ್ದು, ಬಳಿಕ ಉದ್ಯೋಗ ನೀಡದೆ ವಂಚಿಸಿ ರುವುದಾಗಿ ದೂರು ನೀಡಲಾಗಿತ್ತು.
2021 ಮೇ ಹಾಗೂ ಜುಲೈ ತಿಂಗಳಲ್ಲಿ ಹಣ ನೀಡಲಾಗಿತ್ತು ಇದೇ ರೀತಿ ಇತರ ಮೂವರಿಂದ 9 ಲಕ್ಷ ರೂ. ಸೇರಿದಂತೆ ಒಟ್ಟು 12 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.