ಕಾಸರಗೋಡು: ಎನ್ಐಎ ದಾಳಿ ಹಾಗೂ ಮುಖಂಡರ ಬಂಧನ ಪ್ರತಿಭಟಿಸಿ ನಾಳೆ ( ೨೩) ಕೇರಳದಲ್ಲಿ ಹರತಾಳಕ್ಕೆ ಪಾಪ್ಯುಲರ್ ಫ್ರ೦ಟ್ ಕರೆ ನೀಡಿದೆ . ಬೆಳಿಗ್ಗೆ ಆರರಿಂದ ಸಂಜೆ ಆರರ ತನಕ ಹರತಾಳ ನಡೆಯಲಿದೆ ರಾಜ್ಯ ಮುಖಂಡರು ತಿಳಿಸಿದ್ದಾರೆ.
ಬುಧವಾರ ಮಧ್ಯರಾತ್ರಿಯಿಂದ ಎನ್ಐಎ ಮಿಂಚಿನ ದಾಳಿ , ನಡೆಸಿದ್ದು ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮುಖಂಡರನ್ನು ಬಂಧಿಸಿದ್ದು, ಇದನ್ನು ಪ್ರತಿಭಟಿಸಿರುವ ಸಂಘಟನೆ ಕೇರಳದ ರಾಜ್ಯವ್ಯಾಪಿ ಹರತಾಳಕ್ಕೆ ಕರೆ ನೀಡಿದೆ.