ಕಾಸರಗೋಡು: ಹಾವೇರಿಯಲ್ಲಿ ನಡೆದ ಅಪಘಾತದಲ್ಲಿ ಕಾಸರಗೋಡಿನ ದಂಪತಿ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಕಾಸರಗೋಡು ನಗರ ನುಸ್ರತ್ ನಗರದ ಮುಹಮ್ಮದ್ (೬೫) ಮತ್ತು ಪತ್ನಿ ಆಯಿಷಾ ( ೬೨) ಮೃತಪಟ್ಟವರು. ಮುಹಮ್ಮದ್ ರವರ ಪುತ್ರ ಸಿಯಾದ್, ಪತ್ನಿ ಸಜ್ನಾ, ಮಕ್ಕಳಾದ ಮುಹಮ್ಮದ್ , ಆಯಿಷಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತದೇಹವನ್ನು ಹಾನಗಲ್ ತಾಲೂಕು ಆಸ್ಪತ್ರೆಯ ಶವಗಾರ ದಲ್ಲಿರಿಸಲಾಗಿದೆ, ಹುಬ್ಬಳ್ಳಿಗೆ ತೆರಳುತ್ತಿದ್ದಾಗ ಇವರು ಸಂಚರಿಸುತ್ತಿದ್ದ ಕಾರು ಮತ್ತು ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸಿನ ನಡುವೆ ಅಪಘಾತ ನಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು , ಪರಿಸರವಾಸಿಗಳು ಕಾರಿನಲ್ಲಿ ಸಿಲುಕಿದವರನ್ನು ಹೊರತೆಗೆದು ಆಸ್ಪತ್ರೆಗೆ ತಲಪಿಸಿದರೂ ಮುಹಮ್ಮದ್ ಮತ್ತು ಆಯಿಷಾರವರ ಜೀವ ಉಳಿಸಲಾಗಲಿಲ್ಲ.