ಕಾಸರಗೋಡು : ಮನೆಯಲ್ಲಿ ಬಚ್ಚಿಡಲಾಗಿದ್ದ ಪರವಾನಿಗೆ ಇಲ್ಲದ ಎರಡು ನಾಡ ಕೋವಿಗಳನ್ನು ಆದೂರು ಪೊಲೀಸರು ವಶ ಪಡಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಅಡೂರು ಚಾಮಕೊಚ್ಚಿಯ ಚಿದಾನಂದ ಯಾನೆ ಪವಿತ್ರನ್ ಎಂಬಾತನ ಮನೆಯಿಂದ ಅಕ್ರಮ ನಾಡಕೋವಿಗಳನ್ನು ವಶಪಡಿಸಲಾಗಿದ್ದು. ಚಿದಾನಂದ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದೂರು ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಯಿತು.