News Karnataka Kannada
Monday, April 29 2024
ಕಾಸರಗೋಡು

ನಾಗರಿಕರನ್ನು ಬೆಚ್ಚಿ ಬೀಳಿಸಿದ್ದ ಕುಖ್ಯಾತ ದರೋಡೆಕೋರನ ಬಂಧನ

Kasar
Photo Credit :

ಕಾಸರಗೋಡು : ನಾಗರಿಕರನ್ನು ಬೆಚ್ಚಿ ಬೀಳಿಸಿದ್ದ ಕುಖ್ಯಾತ ದರೋಡೆಕೋರನನ್ನು ಕೊಚ್ಚಿಯಿಂದ ಪೊಲೀಸರು ಬಂಧಿಸಿದ್ದಾರೆ. ಮಡಿಕೈ ಯ  ಅಶೋಕ್ ( ೩೦)  ಬಂಧಿತ ಆರೋಪಿ .

ಈತನಿಗಾಗಿ ಪೊಲೀಸರು ಕಳೆದ ಎರಡು  ತಿಂಗಳಿನಿಂದ ಕಾಡು , ಬೆಟ್ಟ ಸೇರಿದಂತೆ ಹಲವೆಡೆ  ಹುಡುಕಾಟ ನಡೆಸಿದ್ದರು . ಡ್ರೋನ್ ಬಳಸಿ ಶೋಧ ನಡೆಸಿದ್ದರು . ಮಾರ್ಚ್ ೯ ರಂದು  ಮಡಿಕೈ ಸಮೀಪ  ಬಿಜಿತಾ ಎಂಬ ಮಹಿಳೆಯ ತಲೆಗೆ ಬಡಿದು ಚಿನ್ನಾಭರಣವನ್ನು ದೋಚಿದ್ದನು.

ಸಮೀಪದ ಕಾಡಿಗೆ ಈತ , ಪರಾರಿಯಾಗಿದ್ದು, ಬಳಿಕ  ಈತನ ಸುಳಿವು  ಇರಲಿಲ್ಲ . ಇದರಿಂದ ಕಾಡಿನಲ್ಲಿ ಅವಿತಿರುವ ಬಗ್ಗೆ  ಪರಿಸರದ ೩೦೦ ಎಕೆರೆ  ಯಷ್ಟು  ಕಾಡು ಹಾಗೂ ಬೆಟ್ಟ ಸೇರಿದಂತೆ ಹಲವೆಡೆ ಶೋಧ ನಡೆಸಿದ್ದರು.

ಇತರ ಸ್ಥಳಗಳಲ್ಲೂ  ಈತನಿಗಾಗಿ ತನಿಖೆ ನಡೆಸಿದ್ದರು . ಈ ನಡುವೆ ಸೋಮವಾರ ಸಂಜೆ  ಮಡಿಕೈ  ಪರಿಸರದ ಕ್ಲಬ್ ವೊಂದರ ಯುವಕರು ಕೊಚ್ಚಿಗೆ  ತೆರಳಿದ್ದ ಸಂದರ್ಭದಲ್ಲಿ  ಮೊಬೈಲ್ ಅಂಗಡಿಯೊಂದಕ್ಕೆ ಆಗಮಿಸಿದ್ದ ಈತ ಮೊಬೈಲ್ ಫೋನ್ ನ್ನು  ಮಾರಾಟಕ್ಕೆ ಯತ್ನಿಸಿದ್ದು , ಈ ಸಂದರ್ಭದಲ್ಲಿ  ಯುವಕರು  ಸಂಶಯ ಗೊಂಡು ಈತನ  ಫೋಟೋ ತೆಗೆದು ಊರಿಗೆ ಕಳುಹಿಸಿದ್ದರು.

ಊರಲ್ಲಿದ್ದವರು ಫೋಟೋ ಗಮನಿಸಿ  ಅಶೋಕ್ ಎಂಬುದನ್ನು ಖಚಿತಪಡಿಸಿದ್ದು , ಇದರಿಂದ ಪೊಲೀಸರಿಗೆ ಮಾಹಿತಿ ನೀಡಿದರು. ಮಫ್ತಿಯಲ್ಲಿ  ಬಂದ  ಪೊಲೀಸರು ಹಾಗೂ ಯುವಕರು ಅಶೋಕ್ ನನ್ನು  ಹಿಡಿಯುವಲ್ಲಿ ಯಶಸ್ವಿಯಾದರು.  ಹಲವಾರು ಪ್ರಕರಣಗಳ ಆರೋಪಿಯಾಗಿರುವ ಅಶೋಕ್  ಪೊಲೀಸರಿಗೆ ಸವಾಲಾಗಿದ್ದನು.

ಪರಿಸರವಾಸಿಗಳಲ್ಲಿ ಭಯ ಉಂಟು ಮಾಡಿತ್ತು . ಮನೆಗೆ ನುಗ್ಗಿ ಕಳವು ಗೈದ ಬಳಿಕ ಈತ ಕಾಡಿಗೆ ಪರಾರಿಯಾಗುತ್ತಿದ್ದ  ದಿನಗಳ ಬಳಿಕ ಇನ್ನೊಂದು ಕಳವು ನಡೆಸುವ ಮೂಲಕ ಪ್ರತ್ಯಕ್ಷವಾಗುತ್ತಿದ್ದ . ಈ ಹಿನ್ನಲೆ ಯಲ್ಲಿ ದಿನಗಳ ಕಾಲ ಪೊಲೀಸರು ಕಾಡು ಕೇಂದ್ರೀಕರಿಸಿ ಶೋಧ ನಡೆಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು