ಕಾಸರಗೋಡು : ಅಬಕಾರಿ ದಳದ ವಾಹನಕ್ಕೆ ಕಾರು ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ ಆರೋಪಿಯೋರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬಂದ್ಯೋಡು ಮುಟ್ಟ ಗೇಟ್ ನ ರಕ್ಷಿತ್ ( 23) ಬಂಧಿತ ಆರೋಪಿ. ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ರಕ್ಷಿತ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಈತನನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಮೇ 20 ರಂದು ರಾತ್ರಿ ಉಪ್ಪಳ ಸಮೀಪದ ಸೊಂಕಾಲ್ ನಲ್ಲಿ ಕಾರನ್ನು ತಪಾಸಣೆ ಗಾ ಗಿ ನಿಲ್ಲಿಸಲು ಸೂಚನೆ ನೀಡಿದಾಗ ಅಬಕಾರಿ ದಳದ ವಾಹನಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾ ಗ ಲೆತ್ನಿಸಿದ್ದು, ಈ ಸಂದರ್ಭದಲ್ಲಿ ಮೂವರು ಅಬಕಾರಿ ದಳದ ಸಿಬ್ಬಂದಿಗಳು ಸೇರಿದಂತೆ ಐವರು ಗಾಯ ಗೊಂಡಿದ್ದರು.
ಗಾಯ ಗೊಂಡ ರಕ್ಷಿತ್ ಮತ್ತು ರೆಜಿನ್ ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು .ಆಸ್ಪತ್ರೆಯಿಂದ ರಕ್ಷಿತ್ ಪರಾರಿಯಾಗಿದ್ದನು. ಕಾರಿನಿಂದ ಭಾರೀ ಪ್ರಮಾಣದ ಮದ್ಯ ವಶಪಡಿಸಿಕೊಳ್ಳಲಾಗಿತ್ತು.