News Karnataka Kannada
Tuesday, May 07 2024
ಕಾಸರಗೋಡು

ತೋಟದಲ್ಲಿ ಹೂತು ಹಾಕಲಾಗಿದ್ದ ಕಾರ್ಮಿಕನ ಮೃತದೇಹದ ಮಹಜರು

Deadbody
Photo Credit :

ಕಾಸರಗೋಡು :ತೋಟದಲ್ಲಿ ಹೂತು ಹಾಕಲಾಗಿದ್ದ ಜಾರ್ಖಂಡ್ ಮೂಲದ ಕಾರ್ಮಿಕನ ಮೃತದೇಹವನ್ನು ರವಿವಾರ ಹೊರ ತೆಗೆದು ಸ್ಥಳದಲ್ಲೇ ಮಹಜರು ನಡೆಸಲಾಯಿತು.

ಮಂಜೇಶ್ವರ ಠಾಣಾ ವ್ಯಾಪ್ತಿಯ ಕನಿಯಾಲ  ಸುದೆಂಬಳದ   ಕೃಷಿಕ ರೋರ್ವರ  ತೋಟದಲ್ಲಿ ಮೃತದೇಹವನ್ನು ಹೂತು ಹಾಕಲಾಗಿತ್ತು.  ಮಧ್ಯಾಹ್ನದ  ವೇಳೆಗೆ ಫಾರೆನ್ಸಿಕ್ ತಜ್ಞರು , ಪೊಲೀಸ್ ಸರ್ಜನ್ ರ ಸಮ್ಮುಖದಲ್ಲಿ  ಮೃತದೇಹವನ್ನು ಹೊರತೆಗೆದರು.
ಪೊಲೀಸರ  ಮನವಿಯಂತೆ ಆರ್ ಡಿ ಒ  ಶನಿವಾರ ರಾತ್ರಿ ಅನುಮತಿ ನೀಡಿದ್ದು , ಇದರಂತೆ ರವಿವಾರ ಮ್ರತದೇಹವನ್ನು  ಹೊಂಡ ಅಗೆದು ಹೊರ ತೆಗೆಯಲಾಯಿತು.

ತೋಟದ ಕೆರೆಯ ಬದಿಯಲ್ಲಿ ಮೃತದೇಹ ಹೂತು ಹಾಕಿ ಅದರ ಮೇಲೆ ತೆಂಗಿನ ಸಸಿಯನ್ನು ನೆಡಲಾಗಿತ್ತು . ಮ್ರತಪಟ್ಟ  ಶಿವಾನಂದ್ ಯಾನೆ ಶಿವಾಜ್ ( ೩೫) ಜೊತೆಗಿದ್ದ ಕಾರ್ಮಿಕರು ಮೃತದೇಹವನ್ನು ಹೊರತೆಗೆಯಲು ನೆರವಾದರು. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶಿವಾಜ್ ನ  ನಿಗೂಢ ಸಾವು ಹಾಗೂ ಹೂತು ಹಾಕಿದ ಘಟನೆಗೆ  ಸಂಬಂಧಪಟ್ಟಂತೆ      ಮನೆ ಮಾಲಕ ಹಾಗೂ    ಕಾರ್ಮಿಕರು ಸೇರಿದಂತೆ ಹತ್ತು ಮಂದಿಯಿಂದ ಪೊಲೀಸರು ಮಾಹಿತಿ ಕಲೆ  ಹಾಕಿದ್ದಾರೆ.
ಮೃತದೇಹದ ಫಾರೆನ್ಸಿಕ್ ಹಾಗೂ ಪರೀಕ್ಷಾ  ವರದಿ ಲಭಿಸಿದ ಬಳಿಕ ಸಾವಿಗೆ  ಮುಂದಿನ ವಿಚಾರಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು