ಕಾಸರಗೋಡು : ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ ಬದಿಯಡ್ಕ ಸಮೀಪದ ವಿದ್ಯಾಗಿರಿ ಕನ್ಯಾನ ಜಂಕ್ಷನ್ ನಲ್ಲಿ ನಡೆದಿದೆ.
ಬೈಕ್ ಸವಾರರಾದ ಪಿಲಾಂಕಟ್ಟೆಯ ಉದಯ ಪಾಟಾಳಿ ( ೪೫) , ಸರಸ್ವತಿ ( ೬೫ ) ಗಾಯಗೊಂಡವರು. ಇಬ್ಬರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬದಿಯಡ್ಕ ಕಡೆಯಿಂದ ಉಬ್ರ೦ಗಳ ದತ್ತ ತೆರಳುತ್ತಿದ್ದ ಬೈಕ್ ಮತ್ತು ಎದುರಿನಿಂದ ಬಂದ ಟಿಪ್ಪರ್ ನಡುವೆ ಅಪಘಾತ ನಡೆದಿದೆ.
ಡಿಕ್ಕಿಯ ರಭಸಕ್ಕೆ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದು , ಪರಿಸರವಾಸಿಗಳು ಆಸ್ಪತ್ರೆಗೆ ತಲಪಿಸಿದರು. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.