ಕಾಸರಗೋಡು : ಕೆಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ರಾತ್ರಿ ನೆಲ್ಲಿಕಟ್ಟೆ ಯಲ್ಲಿ ನಡೆದಿದೆ. ಕೂಂಬ್ದಾಜೆ ಚೋಕೆಮೂಲೆಯ ರವಿ ಮೃತಪಟ್ಟವರು.
ಪುತ್ತೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್ಸು ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ. ಗಂಭೀರ ಗಾಯ ಗೊಂಡಿದ್ದ ರವಿ ರವನ್ನು ಕಾಸರಗೋಡಿಗೆ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸ ಲಾ ಗಳಿಲ್ಲ. ವಿದ್ಯಾನಗರ ಠಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ